Advertisement

ಗೌರಿ ಲಂಕೇಶ್‌ ಹತ್ಯೆ: ಸೋನಿಯಾ, ರಾಹುಲ್‌ಗೆ ಗಡ್ಕರಿ ತರಾಟೆ

06:51 PM Sep 06, 2017 | udayavani editorial |

ಹೊಸದಿಲ್ಲಿ : ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ ಅವರ ಹತ್ಯೆಯ ಆರೋಪವನ್ನು ಬಿಜೆಪಿಯೊಂದಿಗೆ ಅಥವಾ ಅದರ ತತ್ವಗಳನ್ನು ಅನುಸರಿಸುವವರೊಂದಿಗೆ ಜೋಡಿಸುವುದು ನಿರಾಧಾರ ಮತ್ತು ಅನಪೇಕ್ಷಿತ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Advertisement

ಕೇಂದ್ರ ಸರಕಾರಕ್ಕಾಗಲೀ, ಬಿಜೆಪಿ ಅಥವಾ ಯಾವುದೇ ಸಂಘಟನೆಗಾಗಲೀ ಗೌರಿ ಲಂಕೇಶ್‌ ಅವರ ಹತ್ಯೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಗಡ್ಕರಿ ಹೇಳಿದರು. 

ಗೌರಿ ಲಂಕೇಶ್‌ ಅವರ ಹತ್ಯೆಯನ್ನು ನಾವೂ ಖಂಡಿಸುತ್ತೇವೆ; ಆದರೆ ಕೆಲವೊಂದು ರಾಜಕೀಯ ಪಕ್ಷಗಳು ಈ ಘಟನೆಯನ್ನು ಬಿಜೆಪಿಯೊಂದಿಗೆ, ಕೇಂದ್ರ ಸರಕಾರದೊಂದಿಗೆ ಜೋಡಿಸಿರುವುದು ಖಂಡನೀಯ ಎಂದು ಗಡ್ಕರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next