Advertisement

ದೇಶದ ಉದ್ದಗಲಕ್ಕೂ ಕಾಂಕ್ರೀಟ್‌ ರಸ್ತೆ : ಸಚಿವ ಗಡ್ಕರಿ

09:40 AM Jul 30, 2017 | Team Udayavani |

ಥಾಣೆ: ದೇಶದ ಎಲ್ಲ ರಸ್ತೆಗಳನ್ನು ಕಾಲ ಕ್ರಮೇಣ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಹೆಚ್ಚು ಕಾಲ ಬಾಳಿಕೆ ಬರುವ ಕಾರಣ ಇನ್ನು ಮುಂದೆ ಕಾಂಕ್ರೀಟ್‌ ರಸ್ತೆ ಗಳನ್ನು ಮಾಡುವುದರ ಕಡೆಗೆ ಸರಕಾರ ಹೆಚ್ಚಿನ ಗಮನ ಕೊಡಲಿದೆ. 20 ವರ್ಷಗಳ ಹಿಂದೆ ಮುಂಬೈನಲ್ಲಿ ಮಾಡಿದ ಕಾಂಕ್ರೀಟ್‌ ರಸ್ತೆಗಳು ಇಂದಿಗೂ ಉತ್ತಮವಾಗಿವೆ. ಆದರೆ ಕೆಲವು ಗುತ್ತಿಗೆದಾರರು, ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಶಾಹಿಗಳು ಅಂತಹ ರಸ್ತೆ ಬೇಕಾಗಿಲ್ಲ ಎಂದು ದಿಕ್ಕು ತಪ್ಪಿಸುತ್ತಾರೆ. ಸಿಮೆಂಟ್‌ ಕಾಂಕ್ರೀಟಿನ ರಸ್ತೆಗಳು 200 ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next