Advertisement

ನಿತಿನ್ ಗಡ್ಕರಿ ಉತ್ತಮ ವ್ಯಕ್ತಿ, ಅದರೆ ಅವರ ಪಕ್ಷ ಸರಿಯಿಲ್ಲ: ಮಹಾರಾಷ್ಟ್ರ ಸಚಿವ

01:00 PM May 31, 2021 | Team Udayavani |

ಔರಾಂಗಾಬಾದ್: ಕೇಂದ್ರ ಸಚಿವ ನಿತಿನ್ ಗಡ್ಕರಿ ಒಬ್ಬ ಉತ್ತಮ ವ್ಯಕ್ತಿ. ಅದರೆ ಅವರಿರುವ ಪಕ್ಷ ಸರಿಯಿಲ್ಲ ಎಂದು ಮಹಾರಾಷ್ಟ್ರದ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾನ್ ಹೇಳಿದ್ದಾರೆ.

Advertisement

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚವಾನ್, ನಿತಿನ್ ಗಡ್ಕರಿಯವರು ಉತ್ತಮ ವ್ಯಕ್ತಿ. ಮಹಾರಾಷ್ಟ್ರದ ಬಗೆಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದ್ದರೂ, ಜನರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ ಎಂದರು.

ಇದನ್ನೂ ಓದಿ:ಸೋಂಕು ಹರಡಲು ಕಾರಣವಾಗುತ್ತಿದೆಯೇ ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆ?

ಪೆಟ್ರೋಲ್ ಬೆಲೆ ಲೀಟರ್ ಗೆ ಸದ್ಯ ನೂರು ರೂಪಾಯಿ ದಾಟಿದೆ. ದೇಶದಲ್ಲಿ ಸುಮಾರು 12.21 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಬಾಂಗ್ಲಾದೇಶದ ಜನರ ತಲಾ ಆದಾಯ ಭಾರತಕ್ಕಿಂತ ಉತ್ತಮವಾಗಿದೆ. ಕೇಂದ್ರ ಸರ್ಕಾರ ಮಾಡುತ್ತಿರುವ ನೀತಿ ನಿಯಮಗಳು ದೇಶವನ್ನು ಹಾಳು ಮಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಚವಾನ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next