Advertisement

ಎಚ್‌ಎಎಲ್‌ ಎಂಡಿ ನಿರ್ಮಲಾ ಭೇಟಿ

12:30 AM Jan 10, 2019 | |

ಹೊಸದಿಲ್ಲಿ: ರಫೇಲ್‌ ಒಪ್ಪಂದ ವಿವಾದದ ಮಧ್ಯೆಯೇ ಎಚ್‌ಎಎಲ್‌ ಸಿಎಂಡಿ ಆರ್‌ ಮಾಧವನ್‌ರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ್ದಾರೆ. ಜತೆಗೆ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರ ಜತೆಗೂ ಹೊಸದಿಲ್ಲಿಯಲ್ಲಿ  ಮಾತುಕತೆ ನಡೆಸಿದ್ದಾರೆ. ಆರ್ಥಿಕ ಸಮಸ್ಯೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ. ಎಚ್‌ಎಎಲ್‌ ತನ್ನ ಕಾರ್ಯನಿರ್ವಹಣೆ ವೆಚ್ಚವನ್ನು ನಿರ್ವಹಿಸಲು ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಸನ್ನಿವೇಶ ನಿರ್ಮಾಣವಾಗಿದ್ದು ಕೂಡ ವಿವಾದಕ್ಕೀಡಾಗಿತ್ತು.

Advertisement

ಡಿವಿಡೆಂಡ್‌ನಿಂದ ನಷ್ಟ?: ಕಳೆದ ಕೆಲವು ವರ್ಷಗಳಿಂದ 15,500 ಕೋಟಿ ರೂ. ಅನ್ನು ಎಚ್‌ಎಎಲ್‌ನಿಂದ ಡಿವಿಡೆಂಡ್‌ ಮತ್ತು ಬೈ ಬ್ಯಾಕ್‌ ರೂಪದಲ್ಲಿ ಸರಕಾರ ಪಡೆದಿದ್ದರಿಂದಾಗಿಯೇ ಎಚ್‌ಎಎಲ್‌ ನಷ್ಟಕ್ಕೊಳಗಾಗಿದೆ ಎಂದು ಎಚ್‌ಎಎಲ್‌ ಉದ್ಯೋಗಿ ಸಂಘಟನೆಯ ಕಾರ್ಯದರ್ಶಿ ಎಸ್‌ ಚಂದ್ರಶೇಖರ್‌ ಹೇಳಿದ್ದಾರೆ. ಡಿವಿಡೆಂಡ್‌ ರೂಪದಲ್ಲಿ 9000 ಕೋಟಿ ರೂ. ಹಾಗೂ ಬೈ ಬ್ಯಾಕ್‌ ರೂಪದಲ್ಲಿ 6300 ಕೋಟಿ ರೂ.ಅನ್ನು 2003 ರಿಂದ 2018ರವರೆಗೆ ಪಾವತಿ ಮಾಡಲಾಗಿದೆ ಎಂದು ಚಂದ್ರಶೇಖರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next