Advertisement

“ನಿಂಬೆಹಣ್ಣು ರೇವಣ್ಣ’ನ ಆಟ ಈ ಬಾರಿ ನಡೆಯಲ್ಲ: ಈಶ್ವರಪ್ಪ

04:38 AM Apr 13, 2019 | Team Udayavani |

ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ “ನಿಂಬೆಹಣ್ಣು ರೇವಣ್ಣ’ನ ಆಟ ಏನೂ ನಡೆಯಲ್ಲ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಬಿ.ವೈ.ರಾಘವೇಂದ್ರ ಪರ ಅವರು ಪಾದಯಾತ್ರೆ ನಡೆಸಿದರು. ಹಿಂದೆ ದೇವೇಗೌಡರು, ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು.

ಈಗ ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಎಚ್‌.ಡಿ.ರೇವಣ್ಣ ಹೇಳಿದ್ದಾರೆ. ದೇವೇಗೌಡರು ದೇಶ ಬಿಟ್ಟು ಹೋಗುವುದೂ ಬೇಡ. ರೇವಣ್ಣ ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದೂ ಬೇಡ.

ಅಪ್ಪ, ಮಕ್ಕಳು ಮೊದಲು ಸುಳ್ಳು ಹೇಳುವುದನ್ನು ಬಿಡಲಿ ಎಂದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರ ಬಳಿ ದಂಡ ಇರುತ್ತದೋ ಅವರ ಮಾತು ನಡೆಯುತ್ತದೆ.

ಭಾರತೀಯ ಸೇನೆ ಮತ್ತು ಮೋದಿಯ ಶಕ್ತಿ ಗೊತ್ತಾಗಿ ಇಮ್ರಾನ್‌ ಖಾನ್‌ ಭಾರತಕ್ಕೆ ಶರಣಾಗದಿದ್ದರೆ ಪಾಕಿಸ್ತಾನ ಉಳಿಯುವುದಿಲ್ಲ ಎಂದು ಮನಗಂಡು ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next