Advertisement

ನಿಖಿಲ್‌ ಅದ್ಧೂರಿ ನಿಶ್ಚಿತಾರ್ಥ

09:52 AM Feb 12, 2020 | Lakshmi GovindaRaj |

ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಅವರ ವಿವಾಹ ನಿಶ್ಚಿತಾರ್ಥ ರೇವತಿ ಅವರೊಂದಿಗೆ ಸೋಮವಾರ ನೆರವೇರಿತು. ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಖಿಲ್ ಕುಮಾರ್‌, ರೇವತಿಗೆ ಉಂಗುರ ತೊಡಿಸುವ ಮೂಲಕ ಅಧಿಕೃತವಾಗಿ ನಿಶ್ಚಿತಾರ್ಥವಾದರು.

Advertisement

ಬೆಳಗ್ಗೆ 10.30ರ ಮುಹೂರ್ತದಲ್ಲಿ ಒಕ್ಕಲಿಗ ಸಂಪ್ರದಾಯಂತೆ ಶಾಸ್ತ್ರೋಕ್ತವಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ, ನಿಖಿಲ್‌ ಮತ್ತು ರೇವತಿ ಇಬ್ಬರು ಉಂಗುರ ಬದಲಾಯಿಸಿಕೊಂಡರು. ನಿಶ್ಚಿತಾರ್ಥ ಸಮಾರಂಭದಲ್ಲಿ ನಿಖಿಲ್‌ ಮತ್ತು ರೇವತಿ ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು.

ವಿಶೇಷ ಬಿಳಿ ಬಣ್ಣದ ಥೀಮ್‌ನಲ್ಲಿ ನಿಶ್ಚಿತಾರ್ಥದ ಹಾಲ್‌ ಕೂಡ ಸಿಂಗಾರಗೊಂಡಿದ್ದು, ಜೊತೆಗೆ ನಿಶ್ಚಿತಾರ್ಥ ಮಂಟಪ, ಅಲಂಕಾರ, ಹೂಗಳು, ಕಾಪೆಟ್‌ ಸೇರಿದಂತೆ ಪ್ರತಿಯೊಂದು ಸಹ ಬಿಳಿ ಬಣ್ಣದಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತಿತು. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಮತ್ತು ಚಿತ್ರರಂಗದ ಗಣ್ಯರನ್ನು ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರು.

ಹಾಗಾಗಿ ನಿಖಿಲ್‌-ರೇವತಿ ನಿಶಿrತಾರ್ಥ ಸಮಾರಂಭದಲ್ಲಿ ಗೌಡರ ಕುಟುಂಬ ಮತ್ತು ರೇವತಿ ಕುಟುಂಬದ ಜೊತೆಗೆ ರಾಜಕೀಯ ಮತ್ತು ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ಚಿತ್ರರಂಗದಿಂದ ನಟರಾದ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌, ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಾಗಿ ಶುಭ ಹಾರೈಸಿದ್ದಾರೆ.

ಮೂಲಗಳ ಪ್ರಕಾರ ಏಪ್ರಿಲ್‌ 17ರಂದು ರಾಮನಗರ-ಚನ್ನಪಟ್ಟಣದ ಮಧ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲು ದೇವೇಗೌಡರ ಕುಟುಂಬ ಚಿಂತನೆ ನಡೆಸಿದೆ ಎನ್ನಲಾಗುತ್ತಿದ್ದು, ವಿವಾಹದ ದಿನಾಂಕ, ಸ್ಥಳದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next