Advertisement

ರಾಮನಗರದಿಂದ ನಿಖಿಲ್‌ ಸ್ಪರ್ಧೆ?

11:26 PM Mar 03, 2020 | Lakshmi GovindaRaj |

ರಾಮನಗರ: ಮುಂಬರುವ ವಿಧಾನಸಭಾ ಚುನಾವಣೆಗೆ ರಾಮನಗರ ಕ್ಷೇತ್ರ ದಿಂದ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವ ಸೂಚನೆಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನೀಡಿದ್ದಾರೆ.

Advertisement

ರಾಮನಗರದ ಹೊರವಲಯದಲ್ಲಿರುವ ಜಾನಪದ ಲೋಕದ ಬಳಿಯ ಖಾಸಗಿ ಭೂಮಿಯಲ್ಲಿ ನಿಖಿಲ್‌-ರೇವತಿ ವಿವಾಹ ಸಿದ್ಧತೆ ಕಾರ್ಯ ವೀಕ್ಷಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಾಸನಕ್ಕೆ ರೇವಣ್ಣ, ಪ್ರಜ್ವಲ್‌ ಸೀಮಿತರಾಗಿದ್ದಾರೆ. ರಾಮನಗರದಲ್ಲಿ ನಾನು ಮತ್ತು ಕುಮಾರಸ್ವಾಮಿ ಸೀಮಿತರಾಗಿದ್ದೆವು. ಜನರ ಆಶೀರ್ವಾದವಿದ್ದರೆ ನಿಖಿಲ್‌ ಇಲ್ಲಿಂದ ಸ್ಪರ್ಧೆ ಮಾಡಬಹುದು ಎಂದರು.

ರಾಮನಗರದಲ್ಲಿ ನಿಖಿಲ್‌ನ ವಿವಾಹ ಮಾಡು ತ್ತಿರುವುದು ನನ್ನ ಪರ್ಸನಲ್‌ ಕಮಿಟ್ಮೆಂಟ್‌. ಮದುವೆಗೂ, ನಿಖಿಲ್‌ ರಾಜ ಕೀಯ ಭವಿಷ್ಯಕ್ಕೂ ಸಂಬಂಧವಿಲ್ಲ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next