Advertisement

ರಾತ್ರಿ ಕರ್ಫ್ಯೂ ಕಟ್ಟುನಿಟ್ಟು: ಬೊಮ್ಮಾಯಿ

07:34 AM Jul 02, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹಾಗೂ ಜನ, ವಾಹನ ಸಂಚಾರ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಂಟೈನ್ಮೆಂಟ್‌ ವಲಯ, ಸೀಲ್‌ಡೌನ್‌ ಪ್ರದೇಶಗಳಲ್ಲಿ ಕಟ್ಟು  ನಿಟ್ಟಿನ ಲಾಕ್‌ಡೌನ್‌ ಜಾರಿ ಹೊಣೆಗಾರಿಕೆ ಆಯಾ ಡಿಸಿಪಿಗಳಿಗೆ ನೀಡಲಾಗುವುದು.

Advertisement

ವಿದೇಶದಿಂದ ಬಂದವರನ್ನು ಕ್ವಾರಂಟೈನ್‌ ಮಾಡುವ ಮಾದರಿಯಲ್ಲೇ ಆ ಪ್ರದೇಶಗಳಲ್ಲಿ  ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆಯ ನಂತರ ಮಾತನಾಡಿ, ಬೆಂಗಳೂರು ನಗರದಲ್ಲಿ ಬಿಬಿಎಂಪಿ, ಪೊಲೀಸ್‌ ಇಲಾಖೆ, ಗೃಹರಕ್ಷಕ ದಳ, ಸ್ವಯಂ ಸೇವಕರು ಸಮನ್ವಯತೆಯಿಂದ ಕೆಲಸ ಮಾಡುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.

ಕಂಟೈನ್‌ಮೆಂಟ್‌ ವಲಯಗಳು, ಸೀಲ್‌ಡೌನ್‌ ಪ್ರದೇಶಗಳಲ್ಲಿ ಬಿಬಿಎಂಪಿ, ಪೊಲೀಸ್‌ ಇಲಾಖೆ ಸಿಬ್ಬಂದಿ ಜತೆಗೆ ಗೃಹ ರಕ್ಷಕರನ್ನೂ ತೆಗೆದುಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ಹೋಂ ಕ್ವಾರಂಟೈನ್‌ ಮಹತ್ವ ಪಡೆದುಕೊಳ್ಳುವುದರಿಂದ ಹೋಂ ಕ್ವಾರಂಟೈನ್‌ ವ್ಯವಸ್ಥೆಯಲ್ಲಿ ಸಮುದಾ ಯ ವನ್ನು ಭಾಗಿಯಾಗಿಸಬೇಕು. ವಾರ್ಡ್‌ವಾರು ಬಿಬಿಎಂಪಿ, ಪೊಲೀಸ್‌, ಗೃಹರಕ್ಷಕ ದಳ, ಸ್ವಯಂ  ಸೇವಕರು ಸಮನ್ವಯತೆ ಯಿಂದ ಕೆಲಸ ಮಾಡಬೇಕು.

ಹೋಂ ಕ್ವಾರಂಟೈನ್‌ ಆಗಿರುವವರಿಗೆ ಆ್ಯಪ್‌ ಜೋಡಣೆಯಾಗಿರುತ್ತದೆ. ಅದರ ಮಾಹಿತಿಯೂ ಪೊಲೀಸರಿಗೆ ಇರಬೇಕೆಂದು ಹೇಳಿದರು. ರಾತ್ರಿ ಕರ್ಫ್ಯೂ ವೇಳೆ ವಾಹನ ಸಂಚಾರ ನಿಲ್ಲಿಸಬೇಕು. ಈ  ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಲಾಗುವುದು. 600 ಆಟೋ ರಿಕ್ಷಾದಲ್ಲಿ ರಾತ್ರಿ ಕರ್ಫ್ಯೂ ಜಾರಿ, ಮಾಸ್ಕ್ ಧರಿಸದಿದ್ದರೆ ದಂಡ, ಸೀಲ್‌ಡೌನ್‌ ಪ್ರದೇಶಗಳಲ್ಲಿ ಹೇಗೆ ನಡೆದುಕೊಳ್ಳ  ಬೇಕೆಂಬ ಬಗ್ಗೆ ತಿಳಿಸಲಾಗುವುದು ಎಂದರು. ಬೆಂಗಳೂರಿನಲ್ಲಿ ಲಾಕ್‌ಡೌನ್‌ ಅಗತ್ಯವೇ ಎಂಬ ಪ್ರಶ್ನೆಗೆ ಸೀಲ್‌ಡೌನ್‌ ಎಂದರೆ ಲಾಕ್‌ಡೌನ್‌ ಅಲ್ಲ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next