Advertisement

ನಿಡ್ಡೋಡಿ: ಪುಸ್ತಕ, ಸಮವಸ್ತ್ರ , ಕೊಡೆ ವಿತರಣೆ

03:45 AM Jul 04, 2017 | Team Udayavani |

ಕಿನ್ನಿಗೋಳಿ: ನಿಡ್ಡೋಡಿ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ  ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರವನ್ನು  ಜು.1 ರಂದು ಶಾಲೆಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು. 
ಪುಸ್ತಕವನ್ನು ಶುಭಕಾಂತಿ ರೈ ಐಕಳ, ಸಮವಸ್ತ್ರವನ್ನು ಜಯರಾಮ ಸುವರ್ಣ ನಿಡ್ಡೋಡಿ,  ಬ್ಯಾಗ್‌ಗಳನ್ನು ಅನಿಲ್‌ ಅಂಚನ್‌ ನಿಡ್ಡೋಡಿ ಹಾಗೂ ಗಣಿತ ನಿಡ್ಡೋಡಿ  ಅವರು ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡೆಯನ್ನು  ವಿತರಿಸಲಾಯಿತು. 

Advertisement

ಶಾಲಾ ಸಂಚಾಲಕ ಜೋಕಿಂ ಕೊರೆಯ, ನಿವೃತ್ತ ಮುಖ್ಯ ಶಿಕ್ಷಕ  ಶ್ಯಾಮಸುಂದರ ರಾವ್‌,  ಹಳೆವಿದ್ಯಾರ್ಥಿಗಳಾದ ಸುಭಾಶ್ಚಂದ್ರ ಮಿತ್ತುಂಜ, ಚಂದ್ರಹಾಸ ಜೋಗಿ, ವಿದ್ಯಾಧರ ಸುವರ್ಣ, ಭವಾನಿ ಅಂಚನ್‌, ಗಣಿತ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next