Advertisement

ಪಡಿತರಕ್ಕಾಗಿ ನೂರಾರು ಜನರ ಸರದಿ

01:31 PM May 07, 2020 | Naveen |

ನಿಡಗುಂದಿ: ಪಟ್ಟಣದ ಗೌರೀಶ್ವರ ದೇವಸ್ಥಾನದ ಬಳಿಯ ವಿಜಯಾ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘದ ಎದುರು ಪಡಿತರ ಧಾನ್ಯ ಪಡೆಯಲು ಮಂಗಳವಾರ ನೂರಾರು ಜನರು ಸರದಿಗಾಗಿ ಸುರಕ್ಷಿತ ಅಂತರದಲ್ಲಿ ಕೈ ಚೀಲಗಳನ್ನು ಸರದಿಯಲ್ಲಿ ಇಟ್ಟಿದ್ದರೆ, ಎಲ್ಲರೂ ಸಾಮಾಜಿಕ ಅಂತರ ಪಾಲಿಸದೇ ಒಂದೆಡೆಯೇ ಕುಳಿತಿದ್ದು ಕಂಡುಬಂತು.

Advertisement

ಸರಕಾರ ಸದ್ಯ ಮೇ ತಿಂಗಳ ಪಡಿತರ ವಿತರಣೆ ಮಾಡುತ್ತಿದೆ. ಜನ ತಂಡೋಪತಂಡವಾಗಿ ಆಗಮಿಸಿ ಪಡಿತರ ಅಂಗಡಿ ಎದುರು ಬೆಳಗ್ಗೆಯಿಂದಲೇ ಬರುತ್ತಿದ್ದಾರೆ. ತಾವು ಸುರಕ್ಷಿತವಾಗಿ ಸಾಮಾಜಿಕ ಅಂತರ ಪಾಲಿಸದೇ ಚೀಲಗಳನ್ನು ಸುರಕ್ಷಿತ ಅಂತರದಲ್ಲಿರಿಸಿ, ತಾವು ಮಾತ್ರ ಗಿಡದ ನೆರಳಲ್ಲಿ ಗುಂಪು ಗುಂಪಾಗಿ ಕುಳಿತುಕೊಳ್ಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಸಹಿತ ಹಾಕಿಕೊಂಡಿರಲಿಲ್ಲ.

ಪಿಎಸ್‌ಐ ಎಚ್ಚರಿಕೆ: ಜನ ಹೆಚ್ಚು ಸೇರಿದ್ದನ್ನು ಗಮನಿಸಿದ ನಿಡಗುಂದಿ ಪಿಎಸ್‌ಐ ಪಡಿತರ ವಿತರಕರಿಗೆ ಗದ್ದಲ ಸೇರದಂತೆ ಕ್ರಮ ಕೈಗೊಳ್ಳಲು ಮತ್ತು ಬೆಳಗ್ಗೆ ಹಾಗೂ ಮಧ್ಯಾಹ್ನ ಎಂದು ವಿಂಗಡಿಸಿ ತಲಾ 70 ಜನರಿಗೆ ಪಡಿತರ ವಿತರಿಸಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next