Advertisement

ಬೆಂಗಳೂರು, ಕಾಶ್ಮೀರದಲ್ಲಿ ದಾಳಿ ನಡೆಸಿದ ಎನ್‌ಐಎ

12:00 AM Oct 29, 2020 | mahesh |

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳು, ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕವಾದಿಗಳು ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಮೇಲೆ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರಿನ ಒಂದು, ಜಮ್ಮು-ಕಾಶ್ಮೀರದ 10 ಕಡೆಗಳಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಕೆಲವು ಸಂಘಟನೆಗಳು ಹಾಗೂ ಅವುಗಳ ಸದಸ್ಯರ ಮನೆಗಳಲ್ಲಿ ತಪಾಸಣೆ ನಡೆಸಿದ್ದಾರೆ.

Advertisement

ಕೆಲವು ಎನ್‌ಜಿಒ ಮತ್ತು ಟ್ರಸ್ಟ್‌ಗಳು ದೇಣಿಗೆ ಮತ್ತು ವ್ಯಾಪಾರ ಕೊಡುಗೆಗಳ ರೂಪದಲ್ಲಿ ಭಾರತ ಮತ್ತು ವಿದೇಶಗಳಿಂದ ಹಣ ಸಂಗ್ರಹಿಸಿ ಭಯೋತ್ಪಾದನೆ ಮತ್ತು ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಚಟು ವಟಿಕೆಗಳ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಸಂಪೂರ್ಣ ತನಿಖೆ ನಡೆಸಿ ಅ. 8ರಂದು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ.

ಜೆಕೆಸಿಸಿಎಸ್‌ ಜತೆ ಸ್ವಾತಿ ನಂಟು
ಬೆಂಗಳೂರಿನ ಆರ್‌.ಟಿ. ನಗರದ ಸ್ವಾತಿ ಶೇಷಾದ್ರಿ ಅವರ ಕಚೇರಿ ಮತ್ತು ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಈಕೆ “ಇಕ್ವಿಷನ್‌’ ಎಂಬ ಸರಕಾರೇತರ ಸಂಸ್ಥೆ ನಡೆಸು ತ್ತಿದ್ದರು. ಜಮ್ಮು-ಕಾಶ್ಮೀರದಲ್ಲಿ 370 ರದ್ದು ಪಡಿಸಿದ ಬಳಿಕ ಅಲ್ಲಿನ ವಸ್ತುಸ್ಥಿತಿ ಬಗ್ಗೆ 2019ರಲ್ಲಿ ಮಾಹಿತಿ ಸಂಗ್ರಹಿಸಿದ್ದರು. ಆಕೆ ಸರಕಾರೇತರ ಸಂಸ್ಥೆ ಜೆಕೆಸಿಸಿಎಸ್‌ ಜತೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಇದೆ.

ಕಾಶ್ಮೀರದಲ್ಲೂ ದಾಳಿ
ಜೆಕೆಸಿಸಿಎಸ್‌ ಸಂಯೋಜಕ ಖುರಂ ಪರ್ವೇಜ್‌, ಅವರ ಸಹಚರರು, ಪರ್ವೀನಾ ಅಹಂಗೇರ್‌ ಮತ್ತು ಎನ್‌ಜಿಒ ಅರ್ಥರೂಟ್‌ ಮತ್ತು ಗ್ರೇಟರ್‌ ಕೈಲಾಶ್‌ (ಜಿ.ಕೆ.) ಟ್ರಸ್ಟ್‌ನ ನಿವಾಸ ಮತ್ತು ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಶ್ರೀನಗರದ ಪತ್ರಿಕೆಯೊಂದರ ಮೇಲೂ ಎನ್‌ಐಎ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next