Advertisement

ಬೆಳ್ಳಂದೂರು ಸಮೀಪದ ಕೈಗಾರಿಕೆ ಮುಚ್ಚಿಸಿ, ಕೆರೆ ಕ್ಲೀನ್ ಮಾಡಿ; NGT

01:22 PM Apr 19, 2017 | Sharanya Alva |

ನವದೆಹಲಿ: ಬೆಳ್ಳಂದೂರು ಕೆರೆಗೆ ತ್ಯಾಜ್ಯ, ಕಲುಷಿತ ನೀರನ್ನು ಬಿಡುವವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ. ಅಷ್ಟೇ ಅಲ್ಲ ಕೆರೆಯ ಸುತ್ತಮುತ್ತ ಇರುವ ಕೈಗಾರಿಕೆಯನ್ನು ಮುಚ್ಚಿಸಿ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಬುಧವಾರ ಖಡಕ್ ಆದೇಶ ನೀಡಿದೆ.

Advertisement

ಬೆಳ್ಳಂದೂರು ಕೆರೆ ಸುತ್ತಲಿನ ಕೈಗಾರಿಕೆಯನ್ನು ತಕ್ಷಣ ಮುಚ್ಚಿಸುವಂತೆ ಎನ್ ಜಿಟಿ ಆದೇಶ ನೀಡಿದೆ. ಕೆರೆಯ ಅಭಿವೃದ್ಧಿಗೆ 2 ದಿನಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿ, ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬೆಳ್ಳಂದೂರು ಕೆರೆಗೆ ಯಾವುದೇ ರೀತಿಯ ತ್ಯಾಜ್ಯ ಹಾಕಬಾರದು. ಇದನ್ನು ತಡೆಗಟ್ಟಿ ಅಭಿವೃದ್ಧಿ ಪಡಿಸಲು ಬಿಡಿಎ, ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಎನ್ ಜಿಟಿ ರಚಿಸಿದೆ.

ನಾಳೆಯಿಂದಲೇ ಬೆಳ್ಳಂದೂರು ಕೆರೆ ಸ್ವಚ್ಚಗೊಳಿಸುವ ಕೆಲಸ ಆರಂಭಿಸಬೇಕು ಎಂದು ಎನ್ ಜಿಟಿ ಸೂಚಿಸಿದೆ. ಸ್ವಚ್ಚತೆ ಆರಂಭಿಸಿರುವ ಬಗ್ಗೆ ಕೂಡಲೇ ವರದಿ ನೀಡಿ. ಇದಕ್ಕಾಗಿ ಟೆಂಡರ್ ಕರೆಯಲೇಬೇಡಿ ಎಂದು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಸಂದೇಶ ರವಾನಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next