Advertisement

ರಾತ್ರಿ ಶೌಚಕ್ಕೆ ತೆರಳಿದ್ದ ನವವಿವಾಹಿತೆ ಅಪಹರಣ

06:30 AM Oct 12, 2018 | Team Udayavani |

ಕೊಪ್ಪಳ: 15 ದಿನಗಳ ಹಿಂದೆ ಮದುವೆಯಾಗಿ ತವರು ಮನೆಗೆ ತೆರಳಿದ್ದ ನವ ವಿವಾಹತೆ ರಾತ್ರಿ ಶೌಚಕ್ಕೆ ತೆರಳಿದ್ದ ವೇಳೆ ಏಳು
ಜನರು ಅಪಹರಣ ಮಾಡಿದ ಪ್ರಕರಣ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗುಡೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

Advertisement

ಕನಕಗಿರಿ ತಾಲೂಕಿನ ನವಲಿ ಗ್ರಾಮದ ಮಲ್ಲನಗೌಡ ಅಯ್ಯನಗೌಡ ಸೆ.24ರಂದು ಗುಡೂರು ಗ್ರಾಮದ ಗಾಯತ್ರಿಯನ್ನು ಮದುವೆಯಾಗಿದ್ದರು.

ಅ.7ರಂದು ಉಡಿ ಅಕ್ಕಿ ಕಾರ್ಯಕ್ರಮಕ್ಕೆಂದು ನವ ವಿವಾಹಿತೆಯ ತವರು ಗ್ರಾಮ ಗುಡೂರಿಗೆ ಆಗಮಿಸದ್ದ ವೇಳೆ ಗಾಯತ್ರಿ ರಾತ್ರಿ 11:30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದಾರೆ. ಈ ವೇಳೆ ಅಂಜುಕುಮಾರ ರೆಡ್ಡಿ ಸೇರಿ ಒಟ್ಟು ಏಳು ಜನರು ಆಕೆಯನ್ನು ಅಪಹರಣ ಮಾಡಿದ್ದಾರೆ ಎಂದು ಪತಿ ಮಲ್ಲನಗೌಡ ಕನಕಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಹರಣದ ಹಿಂದೆ ಹಲವು ಅನುಮಾನಗಳು ಮೂಡಿವೆ. ಅಪಹರಣಕಾರರ ಶೋಧ ಕಾರ್ಯ ನಡೆದಿದೆ ಎಂದು ಎಸ್‌ಪಿ ರೇಣುಕಾ ಸುಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next