Advertisement

Tourism: ಹೊಸ ಪ್ರವಾಸೋದ್ಯಮ ನೀತಿ: ಎಚ್‌.ಕೆ. ಪಾಟೀಲ್‌

11:01 PM Aug 11, 2023 | Team Udayavani |

ಚಿಕ್ಕಬಳ್ಳಾಪುರ: ಪ್ರವಾಸೋದ್ಯಮ ನೀತಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದ್ದು, ತಿಂಗಳೊಳಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿ ಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

Advertisement

ನಂದಿಬೆಟ್ಟದಲ್ಲಿ ಶುಕ್ರವಾರ ಅತ್ಯಾ ಧುನಿಕವಾದ ಸಮ್ಮೇಳನ ಸಭಾಂಗಣ ಉದ್ಘಾಟಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗೆ 300 ಕೋ. ರೂ. ಹೂಡಿಕೆ ಮಾಡಲು ಸರಕಾರ ಅನುಮೋದನೆ ನೀಡಿದೆ ಎಂದರು.

ರಾಜ್ಯದ ಆಕರ್ಷಣೀಯ ಸ್ಥಳಗಳು, ಪರಿಸರವನ್ನು ಇಡೀ ಜಗತ್ತಿಗೆ ತೋರಿಸ ಬೇಕಿದೆ. ಅವು ದೇಶದ ಆಸ್ತಿ ಕೂಡ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮ್ಯೂಸಿಯಂ ಮಾಡುವುದು, ಲಲಿತ್‌ ಮಹಲ್‌ ಅಭಿವೃದ್ಧಿ, ಅರಮನೆಯ ಖಜಾನೆಯಲ್ಲಿ ಇಟ್ಟಿರುವ ಐತಿಹಾಸಿಕ ವಸ್ತುಗಳನ್ನು ಜನರಿಗೆ ನೋಡಲು ಅವಕಾಶ ಮಾಡಿಕೊಡಬೇಕಾಗಿದೆ. ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಹೇಗೆ ಅಭಿವೃದ್ಧಿಗೊಳಿ ಸಬಹುದು ಎಂಬ ಬಗ್ಗೆ ಮನೋಜ್‌ ಕುಮಾರ್‌ ನೇತೃತ್ವದ ಸಮಿತಿ ವರದಿ ನೀಡಿದ್ದು ಅದರ ಅನುಷ್ಠಾನ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next