Advertisement

ನ.1ರಂದು ಹೊಸ ಪಕ್ಷ: ಶೆಣೈ ಘೋಷಣೆ

07:50 AM Oct 13, 2017 | Team Udayavani |

ಕಲಬುರಗಿ: ಜನಧ್ವನಿಯಾಗಲು ನವೆಂಬರ್‌ 1ರಂದು ಹೊಸ ಪಕ್ಷ ಸ್ಥಾಪಿಸುತ್ತಿದ್ದು, ಅಂದೇ ಪಕ್ಷದ ಹೆಸರು ಪ್ರಕಟಿಸುವುದಾಗಿ
ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಘೋಷಿಸಿದರು. 

Advertisement

ನಗರದಲ್ಲಿ ಗುರುವಾರ ಮಾತನಾಡಿ,ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಪಕ್ಷ ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಲಿದೆ. ಬಡವರ, ನೊಂದವರ ನೋವುಗಳಿಗೆ ಸ್ಪಂದಿಸಲು ಪ್ರಮುಖವಾಗಿ ಸಾರ್ವಜನಿಕರ ಪರವಾಗಿ ಕಾಳಜಿಯಿಂದ ನಿಷ್ಪಕ್ಷಪಾತ ಕೆಲಸ ಮಾಡಲು ಹೊಸ ಪಕ್ಷದಿಂದ 60ರಿಂದ 70 ಅಭ್ಯರ್ಥಿಗಳನ್ನು ವಿಧಾನಸಭೆಗೆ ಆರಿಸಿ ಕಳುಹಿಸಬೇಕು.

ಈ ನಿಟ್ಟಿನಲ್ಲಿ ಜನರು ಭ್ರಷ್ಟಾಚಾರ, ಕೋಮುವಾದ, ಸ್ವಾರ್ಥಪರದ ರಾಜಕೀಯಕ್ಕೆ ತಿಲಾಂಜಲಿ ಹಾಡಲು ತಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next