Advertisement

ಇದೀಗ ಬಂದ ಹೊಸ ಸುದ್ದಿ

08:15 AM Mar 30, 2018 | |

ಬ್ರೇಕಿಂಗ್‌ ನ್ಯೂಸ್‌ಗಳಿಗಿಂಥ ಮುನ್ನ ರೇಡಿಯೋ ಮತ್ತು ಟಿವಿಯಲ್ಲಿ ಕೇಳಿಸುತ್ತಿದ್ದ ಮತ್ತು ಕಾಣಿಸುತ್ತಿದ್ದ ಒಂದು ಸಾಲೆಂದರೆ, ಅದು “ಇದೀಗ ಬಂದ ಸುದ್ದಿ’. ಈಗ “ಇದೀಗ ಬಂದ ಸುದ್ದಿ’ ಒಂದು ಚಿತ್ರದ ಹೆಸರಾಗಿದೆ ಮತ್ತು ಆ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಈ ಚಿತ್ರವನ್ನು ಎಸ್‌.ಆರ್‌.ಪಾಟೀಲ್‌ ಎನ್ನುವವರು ನಿರ್ದೇಶಿಸಿದ್ದು, ಬಲರಾಮ್‌, ಮಾಧವ್‌, ಶಿವಕುಮಾರ್‌, ಕಾವ್ಯ, ಲೋಕೇಶ್ವರಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಪಾಟೀಲ್‌ ಅವರೇ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಅವರು ತಮ್ಮ ಸ್ನೇಹಿತರೊಂದಿಗೆ ಸೇರಿ ನಿರ್ಮಿಸುತ್ತಿದ್ದಾರೆ. “ಈ ಚಿತ್ರದ ಶೇ 90ರಷ್ಟು ಜನ ಹೊಸಬರು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ. ಈ ಕಥೆಯನ್ನು ಆರು ಕುಟುಂಬಗಳ ಹಿನ್ನೆಲೆಯಲ್ಲಿ ಹೇಳುವುದಕ್ಕೆ ಹೊರಟಿದ್ದೇನೆ’ ಎಂದು ಅವರು ಹೇಳುತ್ತಾರೆ.

ಕಿರುತೆರೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಸುಕುಮಾರ್‌ ಈ ಚಿತ್ರದ ಒಂದು ಪ್ರಮುಖ ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ. ಶ್ರೀದೇವಿ ಎನ್ನುವವರು ಈ ಚಿತ್ರಕ್ಕೆ ಒಂದು ಹಾಡು ಬರೆದಿದ್ದಾರೆ. ಸತೀಶ್‌ ಛಾಯಾಗ್ರಹಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next