Advertisement

ಎಲ್ಲೆಡೆ ಎಳ್ಳ ಅಮಾವಾಸ್ಯೆ ಸಂಭ್ರಮ

06:19 PM Jan 14, 2021 | Team Udayavani |

ಜೇವರ್ಗಿ: ತಾಲೂಕಿನ ಅವರಾದ ಕ್ರಾಸ್‌ ಹತ್ತಿರದ ವಿಶ್ವರಾಧ್ಯರ ದೇವಸ್ಥಾನದಲ್ಲಿ ಬುಧವಾರ ಸರಳವಾಗಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಲಾಯಿತು. ಕೋವಿಡ್ ಭೀತಿಯಿಂದ ಗ್ರಾಮಸ್ಥರು ಸರ್ಕಾರದ ನಿಯಮದಂತೆ ಸರಳವಾಗಿ ದೇವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ ಅರ್ಪಿಸಿದರು. ನಂತರ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಅನ್ನ ಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಪ್ರಮುಖರಾದ ಡಾ| ಅಮರೇಶ ಕೋಳಕೂರ, ಡಾ| ಪಿ.ಎಂ. ಮಠ, ಎಂ.ಎಸ್‌. ಹಿರೇಮಠ, ಡಾ| ಮಹಾಂತೇಶ ಹಿರೇಮಠ, ಐ.ಎಸ್‌. ಹಿರೇಮಠ, ವೀರಯ್ಯಸ್ವಾಮಿ ಹಿರೇಮಠ, ಶರಣು ಮದರಿ, ಮರೆಪ್ಪ ಮಳಗಿನ್‌, ಶರಣಬಸಪ್ಪ ಮಾವನೂರ, ಮಲ್ಲಿಕಾರ್ಜುನ ಬಿರಾದಾರ, ಅಂಬರೀಶ ಪತಂಗೆ, ಶರಣು ನಾಗರವತ್‌, ಎ.ಸಿ. ಹಾರಿವಾಳ ಇದ್ದರು.

Advertisement

ಇದನ್ನೂ ಓದಿ:ನೆನಪಿರಲಿ, ಕೇಂದ್ರ ಸರ್ಕಾರ ಕೃಷಿ ಮಸೂದೆಯನ್ನು ಹಿಂಪಡೆಯಲೇಬೇಕಾಗುತ್ತದೆ: ರಾಹುಲ್ ಗಾಂಧಿ

Advertisement

Udayavani is now on Telegram. Click here to join our channel and stay updated with the latest news.

Next