Advertisement

ಹೊಸದಾಗಿ ಸದಸ್ಯರ ನೇಮಕ ಶೀಘ್ರ: ಸಚಿವ ಜಿ.ಟಿ.ದೇವೇಗೌಡ

07:30 AM Jul 19, 2018 | Team Udayavani |

ಮೈಸೂರು: ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಶೀಘ್ರವೇ ಹೊಸದಾಗಿ ಸಿಂಡಿಕೇಟ್‌ ಹಾಗೂ ಕಾಲೇಜು ಸಮಿತಿ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರನ್ನು ಸಿಂಡಿಕೇಟ್‌ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡೂ ಪಕ್ಷಗಳಿಗೆ ಸಚಿವ ಸ್ಥಾನಗಳನ್ನು ಹಂಚಿಕೊಳ್ಳಲಾಗಿದೆ. ಈ ನಡುವೆ ಹಿಂದಿನ ಸರ್ಕಾರದಲ್ಲಿ ಮಾಡಲಾಗಿದ್ದ ಎಲ್ಲಾ ನಾಮನಿರ್ದೇಶನ ಗಳನ್ನು ಈಗಾಗಲೇ ಹಿಂಪಡೆಯಲಾಗಿದೆ.ಅದರಂತೆ, ವಿವಿಗಳು ಮತ್ತು ಕಾಲೇಜು ಸಮಿತಿಗಳ ಸಮಿತಿ ಸದಸ್ಯರನ್ನು ಹಿಂಪಡೆಯಲಾಗಿದೆ. ಮತ್ತೂಮ್ಮೆ ಹೊಸ ನೇಮಕಾತಿ ನಡೆಯಲಿದೆ ಎಂದರು.

ಇಲಾಖೆಯಲ್ಲಿ ಉನ್ನತ ಶಿಕ್ಷಣ ಕೌನ್ಸಿಲ್‌ ಇದೆ. ಎಲ್ಲಾ ವಿವಿಗಳ ಕುಲಪತಿಗಳು ಇದರ ಸದಸ್ಯರಾಗಿದ್ದು, ಹಿರಿಯ ತಜ್ಞರಿದ್ದಾರೆ. ಆಗಸ್ಟ್‌ 1ರಂದು ಸಭೆ ಕರೆದು ಅವರೊಂದಿಗೆ ಚರ್ಚಿಸಿ, ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಸರ್ಕಾರದ ಮಟ್ಟದಲ್ಲೇ ಹಾಲಿ ಸಮಿತಿಗಳಿದ್ದು, ಇದರ ಹೊರತು ಇಲಾಖೆಗೆ ಖಾಸಗಿಯಾಗಿ ಯಾರನ್ನೂ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next