Advertisement

ರಾಜ್ಯದಲ್ಲಿ ಎಂಟು ಹೊಸ ಸೋಂಕು ಪ್ರಕರಣಗಳು ಪತ್ತೆ: ವಿಜಯಪುರದ ಮಹಿಳೆ ಸಾವು

08:10 AM May 06, 2020 | keerthan |

ಬೆಂಗಳೂರು: ಕೋವಿಡ್ -19 ಸೋಂಕು ರಾಜ್ಯದಲ್ಲಿ ಇಂದು ಎಂಟು ಜನರಲ್ಲಿ ಪತ್ತೆಯಾಗಿದೆ. ವಿಜಯಪುರದ 62 ವರ್ಷದ ಸೋಂಕಿತ ಮಹಿಳೆ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Advertisement

ಇಂದು ಬೆಂಗಳೂರು ನಗರದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದೆ. 30 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದ್ದು, ಆಕೆಯ ಸೋಂಕು ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. 34 ವರ್ಷದ ಪುರುಷನಿಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ 420ರ ಸಂಪರ್ಕದಿಂದ ಸೋಂಕು ಹರಡಿದೆ. ಜ್ವರ ಶೀತ ಕೆಮ್ಮಿನಿಂದ ಬಳಲುತ್ತಿರುವ 45 ವರ್ಷದ ವ್ಯಕ್ತಿಗೂ ಸೋಂಕು ದೃಢವಾಗಿದೆ.

ಉಳಿದಂತೆ ಬಾಗಲಕೋಟೆಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ. ಓರ್ವ ಗಂಡು ಮತ್ತು ಓರ್ವ ಮಹಿಳೆಗೆ ಸೋಂಕು ತಾಗಿದ್ದು ಇವರಿಬ್ಬರೂ 29 ವರ್ಷದವರಾಗಿದ್ದಾರೆ. ಇವರಿಬ್ಬರಿಗೂ ಸೋಂಕಿತ ಸಂಖ್ಯೆ 367 ಮತ್ತು 368ರ ಸಂಪರ್ಕದಿಂದ ಸೋಂಕು ತಾಗಿದೆ.

ಉತ್ತರಾಖಂಡಕ್ಕೆ ಪ್ರಯಾಣ ಮಾಡಿದ್ದ ಬಳ್ಳಾರಿಯ 43 ವರ್ಷದ ವ್ಯಕ್ತಿಗೆ ಸೋಂಕು ತಾಗಿರುವುದು ದೃಢವಾಗಿದೆ. ಮಂಗಳೂರಿನ 51 ವರ್ಷದ ವ್ಯಕ್ತಿಗೆ ಪಿ-536ರ ಸಂಪರ್ಕದಿಂದ ಸೋಂಕು ಹರಡಿದೆ.

ಕೆಲ ದಿನಗಳಿಂದ ಯಾವುದೇ ಸೋಂಕಿತರಿಲ್ಲದೆ ನೆಮ್ಮದಿಯಿಂದ ಇದ್ದ ಉತ್ತರಕನ್ನಡದ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. 28 ವರ್ಷದ ಭಟ್ಕಳದ ವ್ಯಕ್ತಿಗೆ ಸೋಂಕು ತಾಗಿದೆ.

Advertisement

ರಾಜ್ಯದಲ್ಲಿ ಇಂದು ಎಂಟು ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 324 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 28 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮತ್ತು ಓರ್ವ ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next