Advertisement

ಆಲಂಕಾರಿನಿಂದ ಕುದ್ಮಾರು, ಸವಣೂರು ಮಾರ್ಗವಾಗಿ ನೂತನ ಬಸ್‌ ಸಂಚಾರ ಆರಂಭ

04:53 PM Dec 17, 2017 | |

ಆಲಂಕಾರು: ಕುಮಾರಧಾರಾ ನದಿಗೆ ಶಾಂತಿಮೊಗರು ಬಳಿ ನಿರ್ಮಿಸಲಾದ ಸೇತುವೆ ಉದ್ಘಾಟನೆಗೊಂಡಿರುವುದರಿಂದ
ಕಡಬ, ಆಲಂಕಾರು, ಕುದ್ಮಾರು, ಸವಣೂರು ಮಾರ್ಗವಾಗಿ ಪುತ್ತೂರನ್ನು ಸಂಪರ್ಕಿಸುವ ನೂತನ ಬಸ್‌ ಸಂಚಾರ
ಶನಿವಾರದಿಂದ ಆರಂಭವಾಗಿದೆ. ಧರ್ಮಸ್ಥಳ ಘಟಕದಿಂದ ಈ ಸೇವೆ ಆರಂಭವಾಗಿದ್ದು, ಆಲಂಕಾರಿನಲ್ಲಿ ಸಾರ್ವಜನಿಕರು ಬಸ್ಸನ್ನು ವಿಜೃಂಭಣೆ ಯಿಂದ ಸ್ವಾಗತಿಸಿದರು.

Advertisement

ಬಸ್‌ಸಂಚಾರದ ವೇಳಾಪಟ್ಟಿ
ಬೆಳಗ್ಗೆ ಪುತ್ತೂರಿನಿಂದ ಕಡಬಕ್ಕೆ 6.30ಕ್ಕೆ ಬಸ್‌ ಹೊರಡಲಿದೆ. ಬಳಿಕ 9.15ಕ್ಕೆ ಕಡಬದಿಂದ ಪುತ್ತೂರಿಗೆ, 10.30ಕ್ಕೆ ಪುತ್ತೂರಿನಿಂದ ಕಡಬಕ್ಕೆ, 3.15ಕ್ಕೆ ಕಡಬದಿಂದ ಪುತ್ತೂರಿಗೆ, 4.30ಕ್ಕೆ ಪುತ್ತೂರಿನಿಂದ ಕಡಬಕ್ಕೆ, 5.45ಕ್ಕೆ ಕಡಬದಿಂದ ಪುತ್ತೂರಿಗೆ ಪ್ರಯಾಣ ಬೆಳೆಸಿ ದಿನದ ಸಂಚಾರವನ್ನು ಕೊನೆಗೊಳಿಸಲಿದೆ. ಬಸ್‌ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇತರ ರೂಟ್‌ಗಳ ಬಸ್‌ ಸಂಚಾರದ ವೇಳಾ ಪಟ್ಟಿಯನ್ನು ಹೊಂದಾಣಿಕೆ ಮಾಡಿ ಸಂಚಾರದ ವೇಳಾಪಟ್ಟಿ ಬದಲಾಗುವ ಸಾಧ್ಯತೆಗಳಿವೆ ಎಂದು ಕಡಬ ಸಂಚಾರಿ ನಿಯಂತ್ರಕರು ತಿಳಿಸಿದ್ದಾರೆ.

ಬಸ್‌ಗೆ ಸ್ವಾಗತ
ನೂತನ ಬಸ್‌ ಕಡಬದಿಂದ ಸಂಚಾರ ಆರಂಭಿಸಿದೆ ಎಂದು ತಿಳಿಯುತ್ತಿದ್ದಂತೆ ಆಲಂಕಾರಿನ ಜನತೆ ಸಂಭ್ರಮದಿಂದ ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು. ಬಸ್‌ ಆಲಂಕಾರು ಶರವೂರು ದುರ್ಗಾಪರಮೇಶ್ವರೀ ದೇವಾಲಯದ ಸ್ವಾಗತ ಗೋಪುರ ಪ್ರವೇಶಿಸುತ್ತಿದ್ದಂತೆ, ಹೂಹಾರ ಹಾಕಿ ಸ್ವಾಗತಿಸಲಾಯಿತು. ಬಸ್‌ ಚಾಲಕ ಮತ್ತು ನಿರ್ವಾಹಕರಿಗೆ ಹೂಗುತ್ಛ ನೀಡಿ ಗ್ರಾಮಸ್ಥರು ಬರಮಾಡಿಕೊಂಡರು. ಬಳಿಕ ರಸ್ತೆಗೆ ತೆಂಗಿನಕಾಯಿ ಒಡೆಯುವುದರ ಮೂಲಕ ಧಾರ್ಮಿಕವಾಗಿ ಸ್ವಾಗತಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next