Advertisement

ಮೈಸೂರು, ಬೆಂಗಳೂರಿನಲ್ಲಿ ಹೊಸ ಆಧಾರ್‌ ಸೇವಾ ಕೇಂದ್ರ

11:02 PM Dec 17, 2019 | Lakshmi GovindaRaj |

ನವದೆಹಲಿ: ಕರ್ನಾಟಕದ ಮೈಸೂರು, ಬೆಂಗಳೂರು ಸೇರಿದಂತೆ ದೇಶದ 21 ವಿವಿಧ ಭಾಗಗಳಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಆಧಾರ್‌ ಸೇವಾ ಕೇಂದ್ರ (ಎಎಸ್‌ಕೆ) ಸ್ಥಾಪನೆ ಮಾಡಲಿದೆ. ಶೀಘ್ರದಲ್ಲಿಯೇ ಅವು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಇದರ ಜತೆಗೆ ಇನ್ನೂ 93 ಭಾಗಗಳಲ್ಲಿ ಎಎಸ್‌ಕೆಯನ್ನು ಸ್ಥಾಪನೆ ಮಾಡಲು ಯುಐಡಿಎಐ ಮುಂದಾಗಿದೆ.

Advertisement

ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ಇರುವ ಪೈ ವಿಸ್ತಾ ಕನ್ವೆನ್ಶನ್‌ ಸೆಂಟರ್‌ ಬಳಿ ಒಂದು ಎಎಸ್‌ಕೆ, ಮೈಸೂರಿನವಿಜಯನಗರ ಮೊದಲ ಹಂತದ ಸಿಸಿಕೆ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಸ್ಥಾಪನೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಪ್ರತಿ ದಿನ 1 ಸಾವಿರ ನೋಂದಣಿ ಮತ್ತು ಅಪ್‌ಡೇಟ್‌ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ವಾರದ ಏಳು ದಿನಗಳೂ ಅವುಗಳು ತೆರೆದಿರುತ್ತವೆ. ಹೊಸ ಆಧಾರ್‌ ನೋಂದಣಿ, ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಇ-ಮೇಲ್‌, ಹುಟ್ಟಿದ ದಿನಾಂಕ, ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ಈ ಕೇಂದ್ರಗಳಲ್ಲಿ ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next