Advertisement

ಕಡೆಕಾರು: ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನಕ್ಕೆ ಚಾಲನೆ

07:35 AM Mar 23, 2018 | Team Udayavani |

ಮಲ್ಪೆ: ಕಡೆಕಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನಕ್ಕೆ ರಾಜ್ಯ ಕಾರ್ಯಕಾರಿಣಿ ಸದಸ್ಯ, ಮಂಗಳೂರು ವಿಭಾಗ ಉದಯಕುಮಾರ್‌ ಶೆಟ್ಟಿ ಅವರು ರೈತ ಕಡೆಕಾರು ದೇಜು ಪೂಜಾರಿ ಅವರ ಮನೆಯಲ್ಲಿ ಮುಷ್ಠಿ ಧಾನ್ಯ ಸಂಗ್ರಹಿಸುವ ಮೂಲಕ ಚಾಲನೆ ನೀಡಿದರು. 

Advertisement

ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಗಳು ದುಡಿಯುವ ಕೈಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈಗಿನ ಸರಕಾರದಿಂದ ಪರಿಹಾರ ಸಿಗುವಲ್ಲಿ ತಾರತಮ್ಯವೆಸಗಿದೆ ಎಂದರು.

ಜಿ.ಪಂ.  ಅಧ್ಯಕ್ಷ ದಿನಕರ್‌ ಬಾಬು, ರೈತಮೋರ್ಚಾ  ರಾಘವೇಂದ್ರ  ಉಪ್ಪೂರು, ಕಡೆಕಾರು ಸ್ಥಾನೀಯ ಸಮಿತಿ ಅಧ್ಯಕ್ಷ ರಿಕೇಶ್‌ ಪಾಲನ್‌, ಕಿದಿಯೂರು ಸ್ಥಾನೀಯ ಸಮಿತಿ ಅಧ್ಯಕ್ಷ ರಾಮ್‌ರಾಜ್‌, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸದಸ್ಯೆ ಶಿಲ್ಪಾ ರವೀಂದ್ರ ಕೋಟ್ಯಾನ್‌, ಕಡೆಕಾರ್‌ ಗ್ರಾ. ಪಂ ಉಪಾಧ್ಯಕ್ಷೆ ಮಾಲತಿ ವಿಶ್ವನಾಥ್‌ಶೆಟ್ಟಿ, ಉಡುಪಿ ಬಿಜೆಪಿ ಪ್ರ.ಕಾರ್ಯದರ್ಶಿ ಜಗದೀಶ್‌ ಆಚಾರ್ಯ, ಪಂಚಾಯತ್‌ ಸದಸ್ಯರಾದ ಸಬಿತಾ ಕೃಷ್ಣ, ವಿನೋದಿನಿ ಶೇಖರ, ಶಶಿಧರ್‌ ಕಿದಿಯೂರು, ಅರುಣ್‌ ಕುಮಾರ್‌ ಕಡೆಕಾರ್‌, ಹರೀಶ್‌ ಕಡೆಕಾರ್‌, ಗಿರೀಶ್‌ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next