Advertisement

ಬೋಸ್‌ ನಿಕಟವರ್ತಿ, ಶತಾಯುಷಿ ಕ|ಅಮರ್‌ ಬಹಾದ್ದೂರ್‌ ಸಿಂಗ್‌ ನಿಧನ

08:00 PM Aug 21, 2017 | Team Udayavani |

ಬರೇಲಿ, ಉತ್ತರ ಪ್ರದೇಶ : ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರ ನಿಕಟವರ್ತಿಯಾಗಿದ್ದ ಕರ್ನಲ್‌ ಅಮರ್‌ ಬಹಾದ್ದೂರ್‌ ಸಿಂಗ್‌ ಅವರು ತಮ್ಮ 102ನೇ ವರ್ಷ ಪ್ರಾಯದಲ್ಲಿ, ತಮ್ಮ ಪೂರ್ವಜರ ಗ್ರಾಮವಾದ ಬಹೇರಿಯದ ಶೀರ್ಷಾದಲ್ಲಿ ದೀರ್ಘ‌ ಕಾಲದ ಅನಾರೋಗ್ಯದ ಬಳಿಕ ನಿಧನ ಹೊಂದಿದರು. ವಿಧುರನಾಗಿರುವ ಸಿಂಗ್‌ ಅವರು ಓರ್ವ ಪುತ್ರನನ್ನು ಅಗಲಿದ್ದಾರೆ. 

Advertisement

ಸಿಂಗ್‌ ಅವರು 1933ರಲ್ಲಿ ಬ್ರಿಟಿಷ್‌ ಇಂಡಿಯನ್‌ ಆರ್ಮಿಯನ್ನು ಸೇರಿದ್ದರು. ಅನಂತರ ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರ ಸಂಪರ್ಕಕ್ಕೆ ಬಂದ ಅವರು ನೇತಾಜಿಯವರ ಆಜಾದ್‌ ಹಿಂದ್‌ ಫೌಜ್‌ ಸೇರಿದರು. 

ಸಿಂಗ್‌ ಅವರ ಅಂತ್ಯಕ್ರಿಯೆ ಅನೇಕ ಪ್ರಮುಖ ಗಣ್ಯರ ಸಮ್ಮುಖದಲ್ಲಿ ನಿನ್ನೆ ಸಂಜೆ ನೆರವೇರಿತು. ಸಿಂಗ್‌ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌, ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಸಂತೋಷ್‌ ಗಂಗ್‌ವಾರ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next