Advertisement

ಕನ್ನಡದಲ್ಲಿ ನೀಟ್‌, ಜೆಇಇ ನಡೆಸಿ: ಕೇಂದ್ರಕ್ಕೆ ಮನವಿ

06:50 AM Dec 28, 2017 | Team Udayavani |

ನವದೆಹಲಿ: ವಿಶ್ವಮಟ್ಟದಲ್ಲಿ ಕನ್ನಡ ಭಾಷೆಯನ್ನು ಉತ್ತೇಜಿಸುವುದು ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವಂತೆ ಅವಕಾಶ ಕಲ್ಪಿಸಬೇಕೆಂದು ಕೇಂದ್ರ ಯೋಜನೆ ಮತ್ತು ಸಾಂಖೀÂಕ ಸಚಿವ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ನೇತೃತ್ವದ ನಿಯೋಗವೊಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಮನವಿ ಸಲ್ಲಿಸಿದೆ. 

Advertisement

ಹದಿನಾಲ್ಕು ಸದಸ್ಯರ ನಿಯೋಗದೊಂದಿಗೆ ತೆರಳಿದ ಸದಾನಂದ ಗೌಡ, ಜಾವಡೇಕರ್‌ ಅವರ ಬಳಿ, ವಿಶ್ವ ಸಂಸ್ಥೆಯು ಜಗತ್ತಿನ ಸಾಂಪ್ರದಾಯಿಕ ಭಾಷೆಗಳ ಬಗ್ಗೆ ಆಗಾಗ್ಗೆ ಹೊರಡಿಸುವ ಪ್ರಕಟಣೆಯಲ್ಲಿ ಕನ್ನಡವನ್ನೂ ಸೇರ್ಪಡೆಗೊಳಿಸುವಂತೆ ವಿಶ್ವ ಸಂಸ್ಥೆಗೆ ಶಿಫಾರಸು ಮಾಡಬೇಕು. ಸ್ಪರ್ಧಾ ತ್ಮಕ ಪರೀಕ್ಷೆಗಳಾದ ನೀಟ್‌ ಮತ್ತು ಜೆಇಇ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವಂತೆ ಅವಕಾಶ ಕಲ್ಪಿಸಬೇಕು. ದೀರ್ಘ‌ಕಾಲದಿಂದ ಖಾಲಿಯಿರುವ ಶಾಸ್ತ್ರೀಯ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರ ಹುದ್ದೆ ಭರ್ತಿ ಮಾಡಬೇಕು ಎಂದೂ ಆಗ್ರಹಿಸಿತು. 

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸದಸ್ಯರೊಬ್ಬರು, “”ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು ಬೇಡಿಕೆಗಳನ್ನು ಪರಿಗಣಿಸುವ ಭರವಸೆ ನೀಡಿದ್ದಾರೆ. ಕನ್ನಡ ಭಾಷೆಯನ್ನು ಸಾಂಪ್ರದಾಯಕ ಭಾಷೆಗಳ ಪಟ್ಟಿಗೆ ಪರಿಗಣಿಸುವಂತೆ ವಿಶ್ವಸಂಸ್ಥೆಗೆ ಪತ್ರ ಬರೆಯುವುದಾಗಿ ಸಚಿವರು ತಿಳಿಸಿದ್ದಾರೆ. ಇನ್ನು,  ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಯೋಜನಾ ನಿರ್ದೇಶಕರ ಸ್ಥಾನಕ್ಕೆ ಶೀಘ್ರ ನೇಮಕಾತಿ ಮಾಡುವ ಭರವಸೆಯನ್ನೂ ನೀಡಿದ್ದಾರೆ” ಎಂದು ಅವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next