Advertisement

ನೀರಾವರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ

05:10 PM May 01, 2018 | |

ಶಿಕಾರಿಪುರ: ಮುಖ್ಯಮಂತ್ರಿಯಾದವರು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತರಲ್ಲ. ರಾಜ್ಯದ ಎಲ್ಲಾ ಕ್ಷೇತ್ರಕ್ಕೂ ಸಮಾನ
ಆದ್ಯತೆ ನೀಡಬೇಕು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆ ಅನುಷ್ಠಾನದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕ ಬಿ.ವೈ. ರಾಘವೇಂದ್ರ ಆರೋಪಿಸಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಮುಖಂಡರೊಂದಿಗೆ ಚುನಾವಣೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲ ತಾಂಡವವಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯನ್ನು ಗಮನಿಸಿ ಯಡಿಯೂರಪ್ಪನವರು ಕೇಂದ್ರದ ಜಲಸಂಪನ್ಮೂಲ ಸಚಿವರ ಜೊತೆ ಸಮಾಲೋಚಿಸಿ ತಾಲೂಕಿನ ನಾಲ್ಕು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಬಗ್ಗೆ ಒತ್ತಡ ತಂದ ಪರಿಣಾಮವಾಗಿ ಕೇಂದ್ರದ ದಕ್ಷಿಣ ರಾಜ್ಯದ ಮಾನಿಟರಿಂಗ್‌ ಕಮಿಟಿ, ಬಂದು ಸಮೀಕ್ಷೆ ನಡೆಸಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಡಿ.ಪಿ.ಆರ್‌. ತಯಾರಿಸಲು 3 ಬಾರಿ ಪತ್ರ ಬರೆದಿದ್ದರೂ ರಾಜ್ಯ ಸರ್ಕಾರ ಉಪೇಕ್ಷೆ ಮಾಡಿ ಇದುವರೆಗೆ ಡಿ.ಪಿ.ಆರ್‌. ತಯಾರಿಸಿ ಕಳುಹಿಸಲಿಲ್ಲ. ಮುಖ್ಯಮಂತ್ರಿಗಳು ಬಜೆಟ್‌ಲ್ಲೂ ಈ ನೀರಾವರಿ ಯೋಜನೆಗಳಿಗೆ ಅನುದಾನ ಮಿಸಲಿಟ್ಟಿಲ್ಲ ಎಂದು
ವಾಗ್ಧಾಳಿ ನಡೆಸಿದರು ಶಿಕಾರಿಪುರ ತಾಲೂಕಿನಲ್ಲೂ ರೈತರು, ಬಡವರು ಇದ್ದಾರೆ. ಅವರ ಕಷ್ಟಕ್ಕೆ ನೀರಾವರಿ ಯೋಜನೆಗಳ
ಮೂಲಕ ಸ್ಪಂದಿಸದ ನೀವು ಯಾವ ನೈತಿಕತೆ ಆಧಾರದ ಮೇಲೆ ಶಿಕಾರಿಪುರಕ್ಕೆ ಮತಯಾಚನೆ ಮಾಡಲು ಆಗಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ತಾಲೂಕಿನಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಜೆಡಿಎಸ್‌ ಮುಖಂಡ ಎಚ್‌.ಟಿ. ಬಳಿಗಾರ್‌ ಹೋದಲ್ಲೆಲ್ಲ ಅಧಿಕಾರದಲ್ಲಿದ್ದಾಗ ಬಿಎಸ್‌ವೈ ತಾಲೂಕಿನ ನೀರಾವರಿಗಾಗಿ ಏನೂ ಮಾಡಲಿಲ್ಲ ಎಂದು ಹೇಳುತ್ತಾ ಹೋಗುತ್ತಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ ಇವರು ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಮಾಡಿದರೆ ಮಾತ್ರ ಬೆಂಬಲ ನೀಡುತ್ತೇವೆ ಎಂದು ಏಕೆ ಹೇಳಲಿಲ್ಲ ಎಂದರು ರೈತಸಂಘವನ್ನು ತೊರೆದು ಬಿಜೆಪಿ ಸೇರಿದ ಡಿ.ಎಸ್‌. ಈಶ್ವರಪ್ಪ ಮಾತನಾಡಿ, ನೂರಾರು ವರ್ಷಗಳ ಸುದೀರ್ಘ‌ ಇತಿಹಾಸವಿರುವ ಕಾಂಗ್ರೆಸ್‌ ಪಕ್ಷ ಜನರಿಗೆ ಭಯದ ವಾತಾವರಣ ನಿರ್ಮಿಸುವ ವ್ಯಕ್ತಿಗೆ ತಾಲೂಕಿನಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಅವಕಾಶ ಮಾಡಿಕೊಟ್ಟಿದ್ದು ಸರಿಯಲ್ಲ.

ಇಂತವರು ವಿಧಾನಸಭೆ ಪ್ರವೇಶಿಸಿದರೆ ಹೇಗೆ ಎಂದು ಜನ ಚಿಂತನೆ ಮಾಡುತ್ತಾರೆ ಎಂದರುಇದೇ ಸಂಧರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ರೇವಣಪ್ಪ ಮತ್ತು ಹಲವಾರು ಮುಖಂಡರು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಎಂ.ಬಿ. ಚನ್ನವೀರಪ್ಪ, ಪುರಸಭಾ ಸದಸ್ಯರಾದ ಟಿ.ಎಸ್‌. ಮೋಹನ, ವಸಂತಗೌಡ, ಚಾರಗಲ್ಲಿ ಪರಶುರಾಮ, ಡಿ.ಎಲ್‌. ಬಸವರಾಜ, ಪ್ರವೀಣ್‌ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next