Advertisement

ಎಲ್ಲ ವರ್ಗಗಳ ಕಲ್ಯಾಣಕ್ಕೆ ಬದ್ಧ: ಎನ್‌ಡಿಎ ನಿರ್ಣಯ

12:22 AM Jun 06, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಫ‌ಲಿತಾಂಶದ ಬೆನ್ನಲ್ಲೇ ಬುಧವಾರ ಎನ್‌ಡಿಎ ನಾಯಕರ ಮಹತ್ವದ ಸಭೆ ದಿಲ್ಲಿಯಲ್ಲಿ ನಡೆದಿದ್ದು, ಬಡವರು, ಮಹಿಳೆ ಯರು, ಯುವಕರು, ರೈತರು ಮತ್ತು ಸಮಾಜದಲ್ಲಿ ಹಿಂದುಳಿದವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

Advertisement

ಮೋದಿ ನಿವಾಸದಲ್ಲಿ ಎನ್‌ಡಿಎ ನಾಯಕರು ಸಭೆ ಸೇರಿ ಚರ್ಚಿಸಿದ್ದು, ಸಭೆಯಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ, ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ, ಎಲ್‌ಜೆಪಿ(ಆರ್‌) ನಾಯಕ ಚಿರಾಗ್‌ ಪಾಸ್ವಾನ್‌, ಎನ್‌ಸಿಪಿ ನಾಯಕ ಪ್ರಫ‌ುಲ್‌ ಪಟೇಲ್‌ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೋದಿ ನಾಯಕ್ವತದಲ್ಲಿ ಒಗ್ಗಟ್ಟಾಗಿ ಈ ಚುನಾವಣೆಯಲ್ಲಿ ಹೋರಾಡಿ, ಗೆದ್ದಿದ್ದೇವೆ. ಇದಕ್ಕಾಗಿ ಹೆಮ್ಮೆ ಪಡುತ್ತೇವೆ. ನಾವು ಎನ್‌ಡಿಎ ನಾಯಕರು ಎಲ್ಲರೂ ಮೋದಿಯವರನ್ನು ಅವಿರೋಧವಾಗಿ ನಾಯಕನನ್ನಾಗಿಸಲು ಸಭೆಯ ನಿರ್ಣಯದಲ್ಲಿ ತಿಳಿಸಲಾಗಿದೆ.

ನಾವು ಎನ್‌ಡಿಎ ಜತೆಗೇ ಇದ್ದೇವೆ: ನಾಯ್ಡು
ದಿಲ್ಲಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟಿಡಿಪಿ ನಾಯಕ ಎನ್‌.ಚಂದ್ರಬಾಬು ನಾಯ್ಡು, ನಾವು ಎನ್‌ಡಿಎ ಜತೆಗೇ ಇದ್ದೇವೆ, ಎನ್‌ಡಿಎ ಮೀಟಿಂಗ್‌ಗೆ ಹೋಗುತ್ತಿದ್ದೇನೆ ಎಂದು ಖಚಿತಪಡಿಸಿದರು.

ಶುಕ್ರವಾರ ಎನ್‌ಡಿಎ ಸಂಸದರೆಲ್ಲ ಸಭೆ ಸೇರಿ ಮೋದಿಯವರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತೇವೆ. ನಾಯಕರೆಲ್ಲ ರಾಷ್ಟ್ರಪತಿಯನ್ನು ಭೇಟಿ ಯಾಗಿ ಬೆಂಬಲ ಪತ್ರ ನೀಡುತ್ತೇವೆ.
ಜಿತನ್‌ ರಾಂ ಮಾಂಜಿ, ಎಚ್‌ಎಎಂ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next