Advertisement

ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ: ಎಚ್‌ಡಿಕೆ

11:18 PM Jun 07, 2024 | Team Udayavani |

ಬೆಂಗಳೂರು: ಖಾತೆ ಬಗ್ಗೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ಬೇಕಿರುವುದು ರಾಜ್ಯದ ಸಮಸ್ಯೆಗಳಿಗೆ ಪರಿಹಾರ. ಕೇಂದ್ರ ಸಂಪುಟದಲ್ಲಿ ನನಗೆ ಅವಕಾಶ ದೊರೆತರೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಎನ್‌ಡಿಎ ಸಭೆಯಲ್ಲಿ ಭಾಗವಹಿಸುವಂತೆ ಬಿಜೆಪಿಯ ಅಧ್ಯಕ್ಷರಿಂದ ಸೂಚನೆ ಬಂದಿತ್ತು. ಅದರಂತೆ ಭಾಗಿಯಾಗಿದ್ದೆ. ದೇಶಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಘೋಷಣೆಯಾಗಿದೆ ಎಂದರು.

ಪ್ರಾದೇಶಿಕ ಪಕ್ಷಕ್ಕೆ ಸಂಪುಟದಲ್ಲಿ ಸ್ಥಾನ ಸಿಗುವ ಬಗ್ಗೆ ಚರ್ಚೆ ನಡೆದಿರುವುದು ನನಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನಾನು ಯಾರ ಜತೆಗೂ ಚರ್ಚಿಸಿಲ್ಲ. ನಮ್ಮ ಪಕ್ಷಕ್ಕೂ ಒಂದು ಅವಕಾಶ ಕೊಡುತ್ತಾರೆಂದು ಎರಡೂ¾ರು ತಿಂಗಳಿಂದ ಚರ್ಚೆ ನಡೆದಿದೆ. ನೋಡೋಣ ಎಂದರು.

ಡಾ| ಸಿ.ಎನ್‌. ಮಂಜುನಾಥ್‌ ಬಿಜೆಪಿಯಿಂದ ಗೆದ್ದಿದ್ದಾರೆ. ಅವರ ವಿಚಾರದಲ್ಲಿ ಬಿಜೆಪಿ ಏನು ನಿರ್ಣಯ ಮಾಡುತ್ತದೆಯೋ ಗೊತ್ತಿಲ್ಲ. ಕೇಂದ್ರ ಹಾಗೂ ರಾಜ್ಯದ ನಾಯಕರು ನನ್ನ ಬಗ್ಗೆ ವಿಶ್ವಾಸದಲ್ಲಿದ್ದಾರೆ. ನನ್ನ ಶ್ರಮದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next