Advertisement

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

01:31 AM May 20, 2024 | Team Udayavani |

ಬೇಟಿಯಾ/ಜೌನ್‌ಪುರ: ಇದುವರೆಗೆ ಮುಕ್ತಾಯ ಗೊಂಡ 4 ಹಂತಗಳ ಚುನಾವಣೆಗಳ ಪೈಕಿ ಬಿಜೆಪಿ ನೇತೃ ತ್ವದ ಎನ್‌ಡಿಎಗೆ 270 ಕ್ಷೇತ್ರಗಳಲ್ಲಿ ಜಯ ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಬಿಹಾರ ಮತ್ತು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಪ್ರಚಾರ ನಡೆಸಿದ ಅವರು, ಬಿಹಾ ರದಲ್ಲಿ ಆರ್‌ಜೆಡಿಗೆ 1 ಸ್ಥಾನವೂ ಸಿಗಲಾರದು ಎಂದು ಲೇವಡಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ತೆರಳಿದರೆ ವೋಟ್‌ ಬ್ಯಾಂಕ್‌ ಧಕ್ಕೆಯಾದೀತು ಎಂಬ ಕಾರಣದಿಂದಲೇ ಆರ್‌ಜೆಡಿ, ಕಾಂಗ್ರೆಸ್‌ ಮುಖಂಡರು ಬಂದಿರಲಿಲ್ಲ ಎಂದು ದೂರಿದರು. ಪಿಒಕೆ ಭಾರತದ್ದು ಅದನ್ನು ವಾಪಸ್‌ ಪಡೆದೇ ಪಡೆಯುತ್ತೇವೆ ಎಂದರು.

Advertisement

ಎಸ್‌ಪಿ ನಾಯಕರು ಮೋಜಿಗಾಗಿ ಬರುತ್ತಾರೆ: ಸಿಎಂ ಯೋಗಿ ಟಾಂಗ್‌
ಅಜಂಗಢ್‌: ಸಮಾಜವಾದಿ ಹಾಗೂ ವಿಪಕ್ಷದ ನಾಯಕರು ಅಜಂಗಢ್‌ಗೆ ಕೇವಲ ಮೋಜಿಗಾಗಿ ಬರುತ್ತಾರೆ. ಲೋಕಸಭೆ ಚುನಾವಣೆ ನಂತರ ಪ್ರವಾಸಕ್ಕೆಂದು ಇಂಗ್ಲೆಂಡ್‌ಗೆ ಹೋಗುತ್ತಾರೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಎಸ್‌ಪಿ ನಾಯಕರಿಗೆ ಟಾಂಗ್‌ ನೀಡಿದ್ದಾರೆ. ಚುನಾವಣೆ ರ್ಯಾಲಿಯಲ್ಲಿ ಮಾತನಾಡಿದ ಅವರು, ಮೊದಲು ಅಜಂಗಢ್‌ ಭಯೋತ್ಪಾದನೆಯ ಕೇಂದ್ರವಾಗಿತ್ತು. ದೇಶದಲ್ಲಿ ಎಲ್ಲೆ ಬಾಂಬ್‌ ನ್ಪೋಟವಾದರೂ, ಅಜಂಗಢ್‌ದ ಹೆಸರು ಕೇಳಿ ಬರುತ್ತಿತ್ತು. ಆದರೆ, ಈಗ ಭಯೋತ್ಪಾದನೆ ಪ್ರಕರಣಗಳು ಕಡಿಮೆ ಆಗಿವೆ. ಕೇವಲ ಪಟಾಕಿ ನ್ಪೋಟವಾದರೂ, ಪಾಕಿಸ್ತಾನ ಇದನ್ನು ನಾವು ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಹಾತೊರೆಯುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next