Advertisement

NDA ಕಡಿಮೆ ಸೀಟು: ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‌ಸಿಪಿ ನಡುವೆ ವಾಗ್ವಾದ

12:46 AM Jun 15, 2024 | Team Udayavani |

ಮುಂಬಯಿ: ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಎನ್‌ಸಿಪಿ (ಅಜಿತ್‌ ಬಣ) ಕಡಿಮೆ ಸ್ಥಾನಗಳನ್ನು ಗಳಿಸಿದ್ದು,ದೊಡ್ಡ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಆರ್‌ಎಸ್‌ಎಸ್‌ ಮುಖವಾಣಿ “ಆರ್ಗ ನೈಸರ್‌’ನಲ್ಲಿ ಪ್ರಕಟವಾದ ಲೇಖನ ಉಲ್ಲೇಖೀಸಿ ಉಭಯ ಪಕ್ಷಗಳು ವಾಗ್ವಾದಕ್ಕಿಳಿ ದಿವೆ. ಆರ್‌ಎಸ್‌ಎಸ್‌ ಮುಖಂಡ ರತನ್‌ ಶಾರದಾ ಬರೆದ ಲೇಖನದಲ್ಲಿ ಬಿಜೆಪಿ ಎನ್‌ಸಿಪಿ (ಅಜಿತ್‌ ಬಣ) ಮೈತ್ರಿಯನ್ನು ಪ್ರಶ್ನಿಸಲಾಗಿದೆ. ಈ ಬಗ್ಗೆ ಮಾಜಿ ಸಚಿವ ಪ್ರಫ‌ುಲ್‌ ಪಟೇಲ್‌ ಪ್ರತಿಕ್ರಿಯಿಸಿದ್ದು, “ಒಂದು ಲೇಖನ ಬಿಜೆಪಿಯ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಜತೆಗೆ ಆ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸಬಾರದು ಎಂದಿದ್ದಾರೆ.
ಎನ್‌ಸಿಪಿಯ ಮತ್ತೂಬ್ಬ ನಾಯಕ ಸೂರಜ್‌ ಚವಾಣ್‌, “ಬಿಜೆಪಿ ಗೆದ್ದಾಗ ಆರ್‌ಎಸ್‌ಎಸ್‌ ಶ್ರಮ ಎನ್ನಲಾಗುತ್ತದೆ. ಸೋತಾಗ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ದೂಷಿಸಲಾಗುತ್ತದೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪ್ರವೀಣ್‌ ದಾರೇಕರ್‌, “ಬಿಜೆಪಿ ನಾಯಕರಿಗೆ ಆರ್‌ಎಸ್‌ಎಸ್‌ ಬಗ್ಗೆ ಪೂಜನೀಯ ಭಾವನೆ ಇದೆ. ಆರ್ಗನೈಸರ್‌ ಅವರು ಬಗ್ಗೆ ಮಾತನಾಡಬಾರದಿತ್ತು. ಬಿಜೆಪಿ, ಎನ್‌ಸಿಪಿ ವಿರುದ್ಧ ಮಾತನಾಡಿಲ್ಲ. ಈ ರೀತಿಯ ವಿಚಾರಗಳನ್ನು ಎನ್‌ಡಿಎ ಸಭೆಯಲ್ಲಿ ಚರ್ಚಿಸುವುದು ಸೂಕ್ತ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next