Advertisement

BJP; ತಮಿಳ್ ಸೈಯನ್ನು ಕರೆದು ತರಾಟೆಗೆ ತೆಗೆದುಕೊಂಡ ಶಾ?:ವಿಡಿಯೋ ವೈರಲ್

03:02 PM Jun 12, 2024 | Team Udayavani |

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ನಾಯಕಿ ಮತ್ತು ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವಂತೆ ಕಂಡು ಬಂದಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

Advertisement

ಕೆಮರಾದಲ್ಲಿ ಸೆರೆಹಿಡಿಯಲಾದ ಅಲ್ಪಾವಧಿಯ ಮಾತುಕತೆಯಲ್ಲಿ ತಮಿಳಿಸೈ ಅವರು, ಸಭಾ ವೇದಿಕೆಯಲ್ಲಿ ಆಸೀನರಾಗಿದ್ದ ಅಮಿತ್ ಶಾ ಅವರಿಗೆ ನಮಸ್ಕರಿಸಿ ತೆರಳಿದ್ದಾರೆ. ಆದರೆ ಶಾ ಅವರು ತಮಿಳಿಸೈ ಅವರನ್ನು ಮರಳಿ ಕರೆದು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಸಂಭಾಷಣೆ ಗಂಭೀರ ಸ್ವರೂಪದಂತೆ ಕಂಡು ಬಂದಿದೆ. ಅಮಿತ್ ಶಾ ಅವರ ಮಾತುಗಳಲ್ಲಿ ಆಕ್ರೋಶ ಕಂಡು ಬಂದಂತಿದೆ.

ಕಾರಣವೇನು?
ತಮಿಳುನಾಡಿನಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲು ವಿಫಲವಾದ ಬಳಿಕ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ತಮಿಳಿಸೈ ಸೌಂದರರಾಜನ್ ಅವರ ಬೆಂಬಲಿಗರ ನಡುವಿನ ಒಳಜಗಳ ಆರಂಭವಾಗಿರುವುದು ಬಹಿರಂಗವಾಗಿದ್ದು, ಇದೆ ಕಾರಣಕ್ಕೆ ಶಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next