Advertisement

ನಾಯಕರಿಗೆ ನಾಲ್ಕೇಟು; ಗಡ್ಕರಿ ಮಾತು ಪ್ರಧಾನಿ ಮೋದಿ ವಿರುದ್ಧ: NCP

10:30 AM Jan 28, 2019 | Team Udayavani |

ಮುಂಬಯಿ : ‘ಭರವಸೆ ಈಡೇರಿಸಲು ವಿಫ‌ಲರಾಗುವ ನಾಯಕರಿಗೆ ಜನರು ನಾಲ್ಕು ಬಾರಿಸಬೇಕು’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಈಚೆಗೆ ಹೇಳಿರುವ ಮಾತಿಗೆ ತಿರುಗೇಟು ನೀಡಿರುವ ಎನ್‌ಸಿಪಿ, ‘ಗಡ್ಕರಿ ಅವರ ಈ ಮಾತುಗಳು ಪ್ರಧಾನಿ ನರೇಂದ ಮೋದಿ ಅವರ ವೈಫ‌ಲ್ಯದ ಬಗ್ಗೆ ಬಿಜೆಪಿಯೊಳಗಿನ ಧ್ವನಿಯನ್ನು ಪ್ರತಿಬಿಂಬಿಸುತ್ತದೆ ‘ ಎಂದು ಹೇಳಿದೆ. 

Advertisement

ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಅವರು ಇಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ನಿತಿನ್‌ ಗಡ್ಕರಿ ತಾನು ಪ್ರಧಾನಿ ಮೋದಿ ಅವರಿಗೆ ಪರ್ಯಾಯ ನಾಯಕ ಎಂಬುದನ್ನು ಬಿಂಬಿಸಲು ಪ್ರಯತ್ನಿಸಿರುವಂತಿದೆ; ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದೇ ಖಚಿತ ಇರುವುದರಿಂದ ಗಡ್ಕರಿ ಈ ಮಾತನ್ನು ಆಡಿದ್ದಾರೆ’ ಎಂದು ಹೇಳಿದರು. 

‘ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಸೋಲನುಭವಿಸಿದ ತರುವಾಯ ಗಡ್ಕರಿ ಈ ಬಿಚ್ಚು ಮನಸ್ಸಿನ ಮಾತನ್ನಾಡಿರುವುದರಿಂದ ಲೋಕಸಭಾ ಚುನಾವಣೆ ಬಳಿಕ ಮೋದಿಯಾಗಲೀ ಬಿಜೆಪಿ ಸರಕಾರವಾಗಲೀ ಇರದು ಎಂಬುದರ ಸುಳಿವು ಇದಾಗಿದೆ’ ಎಂದು ಮಲಿಕ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next