Advertisement

Jharkhand: ಮಾವೋವಾದಿಗಳಿಂದ ರೈಲು ಹಳಿ ಸ್ಫೋಟ… ತಪ್ಪಿದ ಅನಾಹುತ, ರೈಲು ಸಂಚಾರ ತಡೆ

12:49 PM Dec 22, 2023 | Team Udayavani |

ಜಾರ್ಖಂಡ್: ಗೋಯಿಲ್ಕೆರಾ ಪೊಲೀಸ್ ಠಾಣಾ ವ್ಯಾಪ್ತಿಯ ಮನೋಹರಪುರ ಮತ್ತು ಗೋಯಿಲ್ಕೆರಾ ನಡುವಿನ ರೈಲ್ವೆ ಹಳಿಯನ್ನು ನಕ್ಸಲರು ಗುರುವಾರ ರಾತ್ರಿ ಸ್ಫೋಟಿಸಿದ್ದು ಇದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಎಸ್ಪಿ ಚೈಬಾಸಾ ಮಾಹಿತಿ ನೀಡಿದ್ದಾರೆ.

Advertisement

ಮತ್ತೊಂದು ಘಟನೆಯಲ್ಲಿ, ಛತ್ತೀಸ್‌ಗಢದ ಬಿಜಾಪುರದಲ್ಲಿ ಮಾವೋವಾದಿಗಳು ಎರಡು ಬಸ್‌ಗಳಿಗೆ ಬೆಂಕಿ ಹಚ್ಚಿರಿವುದಾಗಿ ವರದಿಯಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್‌ಗಳು ಜಗದಲ್‌ಪುರ ಮತ್ತು ಬಿಜಾಪುರ ನಡುವೆ ಸಂಚರಿಸುತ್ತಿದ್ದು, ರಾತ್ರಿ 7 ಗಂಟೆ ಸುಮಾರಿಗೆ ತಿಮ್ಮಾಪುರ ಬಳಿ ಬಸ್ಸನ್ನು ತಡೆದ ಮಾವೋವಾದಿಗಳು ಪ್ರಯಾಣಿಕರನ್ನು ಕೆಳಗಿಳಿಸಿ ಬಳಿಕಬಸ್ಸನ್ನು ಸುಟ್ಟು ಹಾಕಲಾಯಿತು ಎಂದಿದ್ದಾರೆ, ಎರಡೂ ಪ್ರದೇಶಗಳು ಬಸಗೂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಧಾವಿಸಿವೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಆಂಜನೇಯ ವರ್ಷ್ನೇ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನಕ್ಸಲೀಯರು ಬಿಜಾಪುರ-ಜಗ್ದಲ್‌ಪುರ ಹೆದ್ದಾರಿಯಲ್ಲಿ ಮರಗಳನ್ನು ಕಡಿದು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದಾಗಿ ಹೇಳಿದ್ದಾರೆ. ಅದೇ ರೀತಿ ರೈಲ್ವೆ ಹಳಿಯನ್ನು ಸ್ಫೋಟಿಸಿದ ಮಾವೋವಾದಿಗಳು ರೈಲು ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ.

ಇದನ್ನೂ ಓದಿ: Tragedy: 2 ನಿಮಿಷ ನಿನ್ನ ಧ್ವನಿ ಕೇಳಬೇಕೆಂದು ಪತ್ನಿಗೆ ಕರೆ ಮಾಡಿ.. ಆತ್ಮಹತ್ಯಗೆ ಶರಣಾದ ಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next