Advertisement

ಮಾಹಿತಿ ಸೋರಿಕೆ ಪ್ರಕರಣ: ಬಂಧಿತ ನೌಕಾಪಡೆ ಅಧಿಕಾರಿಗೆ ಜಾಮೀನು

01:37 PM Nov 22, 2021 | Team Udayavani |

ನವದೆಹಲಿ: ನೌಕಾಪಡೆಯ ಉಪಕರಣಗಳ ನಿರ್ವಹಣೆ ಮತ್ತು ಖರೀದಿಯ ಗೌಪ್ಯ ಮಾಹಿತಿ ಸೋರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧಿತರಾಗಿರುವ ನೌಕಾಪಡೆಯ ಕಮಾಂಡರ್ ಅಜಿತ್ ಕುಮಾರ್ ಪಾಂಡೆ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

Advertisement

ಸಿಬಿಐ ಅಧಿಕೃತ ರಹಸ್ಯ ಕಾಯಿದೆಯ ಅಡಿಯಲ್ಲಿ ತನಿಖೆಗೆ ಸಂಬಂಧಿಸಿದಂತೆ ಪಾಂಡೆ ಮತ್ತು ಇತರರ ವಿರುದ್ಧ “ಅಪೂರ್ಣ ಚಾರ್ಜ್ ಶೀಟ್” ಅನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಜಾಮೀನು ದೊರಕಿದೆ. ಪಾಂಡೆ ಸೆಪ್ಟೆಂಬರ್ 3 ರಂದು ಬಂಧನಕ್ಕೊಳಗಾಗಿದ್ದರು.

ನ್ಯಾಯಾಲಯದ ಮುಂದೆ ಸಲ್ಲಿಸಲಾದ ಚಾರ್ಜ್ ಶೀಟ್ ಅಪೂರ್ಣವಾಗಿದ್ದು, ಅಧಿಕೃತ ರಹಸ್ಯ ಕಾಯಿದೆ (ಒಎಸ್‌ಎ) ಅಡಿಯಲ್ಲಿ ನಡೆಸಲಾಗುತ್ತಿರುವ ತನಿಖೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಆದರೆ ಈ ಪ್ರಕರಣದಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ವಿಶೇಷ ನ್ಯಾಯಾಧೀಶ ಅನುರಾಧಾ ಶುಕ್ಲಾ ಭಾರದ್ವಾಜ್ ಆದೇಶದಲ್ಲಿ ಹೇಳಿದ್ದಾರೆ.

ಇದೇ ಆಧಾರದ ಮೇಲೆ ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ಕಮಾಂಡರ್ ರಣದೀಪ್ ಸಿಂಗ್ ಮತ್ತು ಕಮಾಂಡರ್ ಸತ್ವಿಂದರ್ ಜೀತ್ ಸಿಂಗ್ ಸೇರಿದಂತೆ ಇತರ ಆರೋಪಿಗಳನ್ನು ನ್ಯಾಯಾಲಯ ಈಗಾಗಲೇ ಬಿಡುಗಡೆ ಮಾಡಿದೆ.

ತನಿಖಾ ಸಂಸ್ಥೆಯು 60 ದಿನಗಳು ಅಥವಾ 90 ದಿನಗಳ ಅವಧಿಯೊಳಗೆ ಆರೋಪ ಪಟ್ಟಿಯನ್ನು ಸಲ್ಲಿಸದಿದ್ದಲ್ಲಿ ಆರೋಪಿಯು ಡೀಫಾಲ್ಟ್ ಜಾಮೀನಿಗೆ ಅರ್ಹನಾಗುತ್ತಾನೆ.

Advertisement

ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ಕಮೋಡೋರ್ ರಣದೀಪ್ ಸಿಂಗ್ ಮತ್ತು ಕಮಾಂಡರ್ ಸತ್ವಿಂದರ್ ಜೀತ್ ಸಿಂಗ್ ಅವರು ಸೆಪ್ಟೆಂಬರ್ 2 ರಂದು ನೌಕಾಪಡೆಯಲ್ಲಿ ನಡೆದ ಸಭೆಗೆ ಸಂಬಂಧಿಸಿದ ನಿರ್ಣಾಯಕ ವಿವರಗಳನ್ನು ಹಂಚಿಕೊಳ್ಳಲು ಹೊರಟಿದ್ದಾರೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಬಿಐ ಇಬ್ಬರನ್ನೂ ಒಂದೇ ದಿನ ಬಂಧಿಸಿತ್ತು.

ಹೈದರಾಬಾದ್ ಮೂಲದ ಕಂಪನಿ ಅಲೆನ್ ರೀನ್‌ಫೋರ್ಸ್ಡ್ ಪ್ಲಾಸ್ಟಿಕ್ ಲಿಮಿಟೆಡ್‌ನಿಂದ ವ್ಯವಹಾರದಲ್ಲಿ ಲಂಚ ಪಡೆದು ನೌಕಾ ಉಪಕರಣಗಳ ಸಂಗ್ರಹಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯ ಸೋರಿಕೆಯ ಆರೋಪಗಳ ಬಗ್ಗೆ ಸಂಸ್ಥೆ ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next