Advertisement

ಮಣಿಪಾಲ ಸಮೂಹ ಸಂಸ್ಥೆ: ರಾಷ್ಟ್ರೀಯ ಸುರಕ್ಷಾ ಸಪ್ತಾಹ-2020 ಆರಂಭ

12:28 AM Mar 05, 2020 | mahesh |

ಮಣಿಪಾಲ: ಮಣಿಪಾಲ ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿರುವ “ರಾಷ್ಟ್ರೀಯ ಸುರಕ್ಷಾ ಸಪ್ತಾಹ-2020’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಉದಯವಾಣಿ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಸಿಇಒ ವಿನೋದ್‌ ಕುಮಾರ್‌ ಅವರು ರಾಷ್ಟ್ರೀಯ ಸುರಕ್ಷಾ ಸಪ್ತಾಹವನ್ನು ಉದ್ಘಾಟಿಸಿದರು. ಅಲ್ಲದೆ ಸಂಸ್ಥೆಯ ಸಿಬಂದಿಗೆ ಸುರಕ್ಷಾ ಪ್ರತಿಜ್ಞೆಯನ್ನು ಬೋಧಿಸಿದರು.

Advertisement

ಮಣಿಪಾಲ ಸಮೂಹ ಸಂಸ್ಥೆಗಳಿಗೆ ಸೇರಿದ ಪ್ರತಿಯೊಂದೂ ಕಂಪೆನಿಯಲ್ಲೂ ಸುರಕ್ಷೆಗೆ ಮೊದಲ ಆದ್ಯತೆ ನೀಡಲಾಗಿದೆ. ಸಿಬಂದಿಯ ವೈಯಕ್ತಿಕ ಸುರಕ್ಷೆ, ಕಂಪೆನಿಯ ಸುರಕ್ಷೆಯ ಜತೆಜತೆಯಲ್ಲಿ ಇಡೀ ಸಮೂಹ ಸಂಸ್ಥೆಗಳ ಸುರಕ್ಷೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿನೋದ್‌ ಕುಮಾರ್‌ ತಿಳಿಸಿದರು.

ಸುರಕ್ಷಾ ಕ್ರಮಗಳ ಬಗೆಗಿನ ಅರಿವಿನ ಕೊರತೆ, ನಿರ್ಲಕ್ಷ್ಯ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಉದ್ಯೋಗ ಸ್ಥಳದಲ್ಲಿ ಸಂಭವಿಸಬಹುದಾದ ದುರ್ಘ‌ ಟನೆಗಳನ್ನು ತಪ್ಪಿಸಲು ಸಿಬಂದಿಯಲ್ಲಿ ಸುರಕ್ಷೆಯ ಮಹತ್ವದ ಬಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಮಣಿಪಾಲ ಸಮೂಹ ಸಂಸ್ಥೆ ಈ ಸಪ್ತಾಹವನ್ನು ಹಮ್ಮಿಕೊಂಡಿದೆ. ಮಾ. 10ರ ವರೆಗೆ ನಡೆಯಲಿರುವ ಸಪ್ತಾಹದ ಸಂದರ್ಭದಲ್ಲಿ ಮಣಿಪಾಲ ಸಮೂಹದ ಕಂಪೆನಿಗಳ ಉದ್ಯೋಗಿಗಳಿಗಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next