Advertisement

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಅಸಮರ್ಪಕ ಕಾಮಗಾರಿ ವಿರುದ್ಧ ಪ್ರತಿಭಟನೆ

04:29 PM Feb 21, 2017 | Team Udayavani |

ಬೈಂದೂರು: ರಾ.ಹೆ. ಚತುಷ್ಪಥ ಅಸಮರ್ಪಕ ಕಾಮಗಾರಿಯಿಂದ  ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಹಾಗೂ ಕುಡಿಯುವ ನೀರು, ಸಂಪರ್ಕ ರಸ್ತೆಗಳ ಬಗ್ಗೆ ಸ್ಥಳೀಯರ ವಿಶ್ವಾಸವನ್ನು ಪಡೆಯುತ್ತಿಲ್ಲ ಎಂದು ಪಡುವರಿ ಗ್ರಾಮಸ್ಥರು ಐ.ಆರ್‌.ಬಿ. ಕಂಪೆನಿಗೆ ಮುತ್ತಿಗೆ ಹಾಕಿದ ಘಟನೆ ಬೈಂದೂರಿನಲ್ಲಿ ನಡೆದಿದೆ. 

Advertisement

ಕಳೆದ ಒಂದೂವರೆ ವರ್ಷದಿಂದ ಬೈಂದೂರು ಭಾಗದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಎಲ್ಲೆಂದರಲ್ಲಿ ಮಣ್ಣನ್ನು ಶೇಖರಿಸಿಡುವುದು, ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಸಾರ್ವ ಜನಿಕರು ರೋಸಿ ಹೋಗಿ ದ್ದಾರೆ. ಈ ಸಮಸ್ಯೆ ಗಳನ್ನು ಶೀಘ್ರ ಇತ್ಯರ್ಥಗೊಳಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಈ ಸಂದರ್ಭ ಮಾತನಾಡಿದ ಹೆದ್ದಾರಿ ಕಾಮಗಾರಿ ಕಂಪೆನಿಯ ಅಧಿ ಕಾರಿ ಯೋಗೇಂದ್ರಪ್ಪ ಸಾರ್ವಜನಿಕರ ಸಮಸ್ಯೆ ಗಳನ್ನು ಗಂಭೀರವಾಗಿ ಪರಿಗಣಿ ಸುತ್ತೇವೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಭರವಸೆ ನೀಡಿದರು. ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟ್ವಾಡಿ, ತಾ.ಪಂ. ಸದಸ್ಯೆ ಗಿರಿಜಾ ಖಾರ್ವಿ, ಪಡವರಿ ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಪಿಡಿಒ ಗಣೇಶ ಹೆಬ್ಟಾರ್‌, ಪಡುವರಿ ಗ್ರಾ.ಪಂ. ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next