Advertisement

ರಾಷ್ಟ್ರೀಯ ಹೆದ್ದಾರಿಗೆ ತೇಪೆ ಆರಂಭ

02:10 AM Jul 04, 2018 | Team Udayavani |

ಕುಂದಾಪುರ: ಕೊನೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಚ್ಚೆತ್ತಿದೆ. ಕುಂದಾಪುರ ಉಪ ವಿಭಾಗ ಸಹಾಯಕ ಕಮಿಷನರ್‌ ಟಿ. ಭೂಬಾಲನ್‌ ಅವರು ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಕುರಿತು ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆದಿದ್ದರು. ಜತೆಗೆ ಇಲ್ಲಿ ಕಳೆದ 8 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಫ್ಲೈ ಓವರ್‌ ಕಾಮಗಾರಿ ಕುರಿತೂ ನೋಟಿಸ್‌ ನೀಡಿ ವಿಚಾರಣೆ ಆರಂಭಿಸಿದ್ದಾರೆ. 

Advertisement

ಮಳೆಗಾಲ ಆರಂಭವಾದೊಡನೆ ಹೊಂಡ ಬಿದ್ದ ಹೆದ್ದಾರಿಯಿಂದಾಗಿ ಸಂಚಾರ ದುಸ್ತರವಾಗಿತ್ತು. ಈ ಕುರಿತು ಪತ್ರಿಕೆಯಲ್ಲಿ ಕೂಡಾ ವರದಿ ಪ್ರಕಟವಾಗಿದೆ. ಜನ ಸದಾ ಹಿಡಿಶಾಪ ಹಾಕುತ್ತಾ ಸಂಚಾರ ಮಾಡುತ್ತಿದ್ದಾರೆ. ಇದೀಗ ರಾಷೀóಯ ಹೆದ್ದಾರಿಗೆ ತೇಪೆ ಹಾಕುವ ಕಾರ್ಯ ಆರಂಭಗೊಂಡಿದೆ. ಸಂಗಮ್‌ನಿಂದ ಬಸ್ರೂರು ಮೂರು ಕೈವರೆಗೆ ಹೆದ್ದಾರಿ ಹೊಂಡ ಬಿದ್ದಿದ್ದು ಶಾಸ್ತ್ರಿ ಸರ್ಕಲ್‌ ಬಳಿ ಕಾಮಗಾರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next