Advertisement

ಕೋವಿಡ್‌ 2ನೇ ಅಲೆ ಅಬ್ಬರ : ರಾಷ್ಟ್ರೀಯ ವಿಪತ್ತು ಘೋಷಣೆಗೆ ಈಶ್ವರ್‌ ಖಂಡ್ರೆ ಆಗ್ರಹ

10:49 PM Apr 18, 2021 | Team Udayavani |

ಬೆಂಗಳೂರು : ರಾಷ್ಟ್ರಾದ್ಯಂತ ಕೋವಿಡ್‌ 2ನೇ ಅಲೆ ಅಬ್ಬರ ಅತಿರೇಕಕ್ಕೆ ಹೋಗುತ್ತಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಬೇಜವಾಬ್ದಾರಿತನವೇ ಕಾರಣ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ತುರ್ತಾಗಿ ಘೋಷಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಅಗತ್ಯ ಜೀವರಕ್ಷಕ ಚುಚ್ಚುಮದ್ದು ಮತ್ತು ಔಷಧಗಳೂ ಸಿಗದಂತೆ ಆಗಿವೆ. ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಸಂಪೂರ್ಣ ನಿಷ್ಕ್ರಿಯವಾಗಿದೆ. ಸರ್ಕಾರಿ ಕೋವಿಡ್‌, ಅಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆಗಳು ಲಭ್ಯವಾಗುತ್ತಿಲ್ಲ. ಕೊರೊನಾ ರೋಗಿಗಳಿಗೆ ಜೀವರಕ್ಷಕ ಎಂದೇ ಪರಿಗಣಿಸಲಾಗಿರುವ ರೆಮಿಡಿಸಿವೀರ್‌ ಚುಚ್ಚುಮದ್ದು ಮತ್ತು ಇತರ ಕೆಲವು ಅಗತ್ಯ ಔಷಧಗಳು ಪರವಾನಗಿ ಪಡೆದ ಖಾಸಗಿ ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ಲಭ್ಯವಾಗುತ್ತಿಲ್ಲ. ಇದಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ತಕ್ಷಣವೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕೋವಿಡ್‌ ಸೋಂಕು ಪರೀಕ್ಷಾ ಪ್ರಯೋಗಾಲಯ, ಚಿಕಿತ್ಸಾ ಸೌಲಭ್ಯ ಕೇಂದ್ರ ತೆರೆಯಬೇಕು, ಸೋಂಕಿತರಿಗೆ ಅದರಲ್ಲೂ ರೋಗಲಕ್ಷಣ ಇರುವ ಸೋಂಕಿತರಿಗೆ ತಕ್ಷಣವೇ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖಾತ್ರಿ ಪಡಿಸಬೇಕು, ಸೋಂಕಿತರ ಸಂಪರ್ಕಿತರ ಪತ್ತೆ, ಪರೀಕ್ಷೆಗೆ ಹೆಚ್ಚಿನ ಗಮನ ಹರಿಸಬೇಕು, ಉಚಿತ ಕರೆಯ ಸಹಾಯವಾಣಿ ಕೇಂದ್ರ ತೆರೆದು ಯಾವ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ. ಆಕ್ಸಿಜನ್‌ ಲಭ್ಯತೆ ಕುರಿತಂತೆ ಡ್ಯಾಷ್‌ ಬೋರ್ಡ್‌ ನಲ್ಲಿ ಮಾಹಿತಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಕೋವಿಡ್ ನಿಯಂತ್ರಣ ವಿಷಯದಲ್ಲಿ ಸಚಿವ ಅಶೋಕ್‌, ಸುಧಾಕರ್‌ ನಡುವೆ ಶೀತಲ ಸಮರ

ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಮುಗ್ಧ ಜನರು ಸಾಯುವಂತಾಗಿದೆ. ಸೋಂಕಿನ ಸಂಖ್ಯೆ ಹೆಚ್ಚಿದಂತೆಲ್ಲಾ, ಹಲವು ಆಸ್ಪತ್ರೆಗಳಲ್ಲಿ ವಂಟಿಲೇಟರ್‌ ಮತ್ತು ಆಕ್ಸಿಜನ್‌ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸರ್ಕಾರ ಕೈಚೆಲ್ಲಿ ಕುಳಿತಿದೆ. ಬಡ ಮತ್ತು ಮಧ್ಯಮವರ್ಗದ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಇದು ಸರ್ಕಾರದ ಕ್ರಿಮಿನಲ್‌ ಬೇಜವಾಬ್ದಾರಿತನ ಎಂದು ಆರೊಪಿಸಿದ್ದಾರೆ.

Advertisement

ಕಳೆದ 3 ತಿಂಗಳಿಂದಲೂ ಕೋವಿಡ್‌ ಕುರಿತ ತಜ್ಞರ ಸಮಿತಿ 2ನೇ ಅಲೆಯ ಬಗ್ಗೆ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡುತ್ತಾ ಬಂದಿದ್ದರೂ ಸರ್ಕಾರ ಸಕಾಲದಲ್ಲಿ ಸೂಕ್ತವಾಗಿ ಸ್ಪಂದಿಸದೇ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಇದ್ದುದೇ ಈ ಪರಿಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಲು ಕಾರಣವಾಯಿತು. ದಿಕ್ಕು ತಪ್ಪಿದ ಸರ್ಕಾರದಿಂದ ಜನ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನಿತ್ಯ 17-18 ಸಾವಿರ ಪ್ರಕರಣ ದಾಕಲಾಗುತ್ತಿರುವುದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಇದು ಸಂಪೂರ್ಣ ಸರ್ಕಾರದ ವೈಫ‌ಲ್ಯವಾಗಿದೆ. ತಕ್ಷಣವೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕೋವಿಡ್‌ ಸೋಂಕು ಪರೀಕ್ಷಾ ಪ್ರಯೋಗಾಲಯ, ಚಿಕಿತ್ಸಾ ಸೌಲಭ್ಯ ಕೇಂದ್ರ ತೆರೆಯಬೇಕು, ಸೋಂಕಿತರಿಗೆ ಅದರಲ್ಲೂ ರೋಗಲಕ್ಷಣ ಇರುವ ಸೋಂಕಿತರಿಗೆ ತಕ್ಷಣವೇ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖಾತ್ರಿ ಪಡಿಸಬೇಕು, ಸೋಂಕಿತರ ಸಂಪರ್ಕಿತರ ಪತ್ತೆ, ಪರೀಕ್ಷೆಗೆ ಹೆಚ್ಚಿನ ಗಮನ ಹರಿಸಬೇಕು, ಉಚಿತ ಕರೆಯ ಸಹಾಯವಾಣಿ ಕೇಂದ್ರ ತೆರೆದು ಯಾವ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ. ಆಕ್ಸಿಜನ್‌ ಲಭ್ಯತೆ ಕುರಿತಂತೆ ಡ್ಯಾಷ್‌ ಬೋರ್ಡ್‌ ನಲ್ಲಿ ಮಾಹಿತಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next