Advertisement

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

07:07 PM Apr 05, 2020 | Hari Prasad |

ಇಪ್ಪತ್ತೊಂದು ದಿನಗಳ ಲಾಕ್‌ ಡೌನ್‌ನ ಸರಿಯಾದ ಅರ್ಧ ಭಾಗ ಮುಕ್ತಾಯವಾಗಿದೆ. ಎ.15ರ ಬಳಿಕ ಕಠಿನ ನಿಯಮಗಳನ್ನು ಕೆಲವು ರಾಜ್ಯಗಳು ಸಡಿಲಿಸುವ ಬಗ್ಗೆ ಯೋಚನೆ ಮಾಡುತ್ತಿವೆ. ಇದರ ಜತೆಗೆ ಕೆಲ ವಿಮಾನ ಯಾನ ಸಂಸ್ಥೆಗಳೂ ಯಾನ ಶುರು ಮಾಡಲು ಸಿದ್ಧಗೊಂಡಿವೆ. ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪೆ ಮಾತನಾಡಿ ಹಂತ ಹಂತವಾಗಿ ನಿಯಮ ಸಡಿಲಿಕೆಗೆ ಚರ್ಚೆಗಳು ನಡೆದಿವೆ ಎಂದಿದ್ದಾರೆ.

Advertisement

ಹೆಚ್ಚಿನ ರೀತಿಯಲ್ಲಿ ಸೋಂಕು ಹರಡಿರುವ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಸುವ ಬಗ್ಗೆ ಇರಾದೆ ಇದೆ ಎಂದಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಲಕ್ನೋದಲ್ಲಿ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿರುವ ಕ್ಲಸ್ಟರ್‌ಗಳನ್ನು ಗುರಿಯಾಗಿಸಿ ಅಲ್ಲಿಂದ ಸೋಂಕು ಹರಡದಂತೆ ಮಾಡಲು ಕ್ರಮ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next