Advertisement

ಚಂದ್ರಯಾನ-3 ರ ಹಿಂದಿನ ನಾರಿ ಶಕ್ತಿ ರಿತು ಕರಿಧಾಲ್‌

09:09 PM Jul 14, 2023 | Team Udayavani |

ನವದೆಹಲಿ: ಚಂದ್ರಯಾನ-3 ಉಡಾವಣೆಯ ಯಶಸ್ಸಿನ ಹಿಂದೆ ಇಸ್ರೋದ ಹಲವು ವಿಜ್ಞಾನಿಗಳ ಶ್ರಮವಿದೆ. ಅದರಲ್ಲೂ ಈ ಯೋಜನೆಯ ಹೊಣೆ ಹೊತ್ತಿರುವ ಡಾ.ರಿತು ಕರಿಧಾಲ್‌ ಶ್ರೀವಾಸ್ತವ ಎಂಬ ಮಹಿಳಾ ವಿಜ್ಞಾನಿಯತ್ತ ಎಲ್ಲರ ಗಮನ ನೆಟ್ಟಿದೆ.

Advertisement

ಇಸ್ರೋದ ಹಿರಿಯ ವಿಜ್ಞಾನಿಗಳ ಪೈಕಿ ಒಬ್ಬರಾಗಿರುವ ಡಾ.ರಿತು ಅವರು ಈ ಮಿಷನ್‌ನ ನೇತೃತ್ವ ವಹಿಸಿದವರು. ಇವರು “ಭಾರತದ ರಾಕೆಟ್‌ ಮಹಿಳೆ’ ಎಂದೇ ಖ್ಯಾತರಾಗಿದ್ದಾರೆ. ಚಂದ್ರಯಾನ-2 ಯೋಜನೆಯ ನಿರ್ದೇಶಕಿಯಾಗಿದ್ದ ರಿತು ಅವರು, ಮಂಗಳಯಾನ ಯೋಜನೆಯ ಉಪ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. ಲಕ್ನೋದಲ್ಲಿ ಜನಿಸಿದ ಇವರು, ಲಕ್ನೋ ವಿವಿಯಲ್ಲೇ ಭೌತಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದರು. ಬಳಿಕ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಎಂಇ ಪದವಿ ಪಡೆದು, 1997ರಲ್ಲಿ ಇಸ್ರೋಗೆ ಸೇರಿದರು.

ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ರಿತು ಶ್ರೀವಾಸ್ತವ ಅವರಿಗೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರು, “ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿ’ ನೀಡಿ ಗೌರವಿಸಿದ್ದರು. ಬಳಿಕ “ಇಸ್ರೋ ಟೀಂ ಅವಾರ್ಡ್‌ ಫಾರ್‌ ಮಾಮ್‌ ಇನ್‌ 2015′, “ಎಎಸ್‌ಐ ಟೀಂ ಅವಾರ್ಡ್‌’, “ವಿಮೆನ್‌ ಅಚೀವರ್ಸ್‌ ಇನ್‌ ಏರೋಸ್ಪೇಸ್‌ 2017′ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ರಿತು ಅವರಿಗೆ ಸಂದಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಡಾ.ರಿತು ಕರಿಧಾಲ್‌ ಅವರ ಸುಮಾರು 20 ಪ್ರಬಂಧಗಳು ಪ್ರಕಟಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next