Advertisement

ಸಬ್ಸಿಡಿ ತ್ಯಜಿಸಿದ 483 ಗ್ಯಾಸ್‌ ಬಳಕೆದಾರರಿಗೆ ಪ್ರಧಾನಿ ಪತ್ರ

10:28 AM Apr 17, 2017 | Karthik A |

ಹಗರಿಬೊಮ್ಮನಹಳ್ಳಿ: ಗ್ಯಾಸ್‌ ಸಬ್ಸಿಡಿ ತ್ಯಜಿಸಿದ ತಾಲೂಕಿನ 483 ಅಡುಗೆ ಅನಿಲ ಬಳಕೆದಾರರಿಗೆ ಪ್ರಧಾನಿ ಮೋದಿ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ಮೊತ್ತ ಪಡೆಯದವರಿಗೆ ಮೋದಿ ಸಹಿ ಇರುವ ಮುದ್ರಿತ ಪತ್ರದ ಹಾಗೂ ಸಿಹಿ ತಿಂಡಿಗಳಿರುವ ಪೊಟ್ಟಣವನ್ನು ಇಲ್ಲಿನ ಅಡುಗೆ ಅನಿಲ ವಿತರಕರಾದ ಮಾತಾ ಗ್ಯಾಸ್‌ ಮಾಲಕ ಯರಿಸ್ವಾಮಿಯವರಿಗೆ ಕಳುಹಿಸಲಾಗಿದೆ. ಇವರು ಸಬ್ಸಿಡಿ ತ್ಯಜಿಸಿದ ಪ್ರತಿಯೊಬ್ಬರಿಗೂ ಮೋದಿ ಪತ್ರ ಹಾಗೂ ಸಿಹಿ ಹಂಚುತ್ತಿದ್ದಾರೆ.

Advertisement

ಮನೆಯಲ್ಲಿ ಎಲ್‌ಇಡಿ ಬಳಸುವ ಮೂಲಕ ವಿದ್ಯುತ್‌ ಮಿತವ್ಯಯಕ್ಕೆ ಇತರರಿಗೂ ಮಾದರಿಯಾಗಿ ಎಂದು ಮುದ್ರಿತ ಪತ್ರದಲ್ಲಿ ಮೋದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ತ್ಯಜಿಸಿದ ಗ್ರಾಹಕರೆಲ್ಲ ಮೋದಿ ಪತ್ರ ಕಂಡು ಸಂತಸಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next