Advertisement

ಹೊಸದಿಲ್ಲಿಯಲ್ಲಿಂದು ಮೋದಿ ಮೆಗಾ ರಾಲಿ; ಪೌರತ್ವ ಕಾಯ್ದೆಯ ಬಗ್ಗೆ ಪ್ರಸ್ತಾಪ ಸಾಧ್ಯತೆ

10:01 AM Dec 23, 2019 | keerthan |

ಹೊಸದಿಲ್ಲಿ:  ಇಲ್ಲಿನ ರಾಮಲೀಲಾ ಮೈದಾನದಲ್ಲಿ ಆಯೋಜನೆಗೊಂಡಿರುವ ಮೆಗಾ ರಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಲಿದ್ದಾರೆ. ದೇಶದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಮೋದಿ ಮಾತನಾಡುವ ಸಾಧ್ಯತೆಯಿದೆ.

Advertisement

ದೆಹಲಿಯ ಇಂದಿನ ಕಾರ್ಯಕ್ರಮಕ್ಕೆ ಭಾರಿ ಜನರು ಸೇರುವ ನಿರೀಕ್ಷೆಯಿದ್ದು, ಬಿಗು ಭದ್ರತೆ ಒದಗಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಹಲವು ದಿನಗಳಿಂದ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವೆಡೆ ಹಿಂಸಾರೂಪವನ್ನೂ ಪಡೆದಿತ್ತು.  ಹೀಗಾಗಿ ಇಂದು ಕಾರ್ಯಕ್ರಮ ನಡೆಯುವ ರಾಮಲೀಲಾ ಮೈದಾನದ ಹೊರಗೆ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ರಾಮಲೀಲಾ ಮೈದಾನದಲ್ಲಿ 20 ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರು, ಎನ್ ಎಸ್ ಜಿ ಕಮಾಂಡೋಗಳನ್ನು ಕಾರ್ಯಕ್ರಮ ನಡೆಯುವ ರಾಮಲೀಲಾ ಮೈದಾನದಲ್ಲಿ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next