Advertisement

ಗ್ರಾಮೀಣರ ಪ್ರಗತಿಗೆ ನರೇಗಾ ಸಹಕಾರಿ

05:29 AM May 16, 2020 | Lakshmi GovindaRaj |

ಹುಣಸೂರು: ಕೊರೊನಾದಿಂದ ರೈತರು, ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಗ್ರಾಪಂ ಉದ್ಯೋಗ ಖಾತರಿ ಯೋಜನೆಯನ್ನು ಗ್ರಾಮಸ್ಥರು, ರೈತರು ಉಪ ಯೋಗಿಸಿಕೊಂಡು ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ಬನ್ನಿಕುಪ್ಪೆ ಗ್ರಾಪಂ ಪಿಡಿಒ ಗಣೇಶಮೂರ್ತಿ ಮನವಿ ಮಾಡಿದರು.

Advertisement

ತಾಲೂಕಿನ ಬನ್ನಿಕುಪ್ಪೆ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿ, ಉದ್ಯೋಗ ಚೀಟಿ ಪಡೆ ಯಲು ಗ್ರಾಪಂಗೆ ಸೂಕ್ತ ದಾಖಲಾತಿ ನೀಡಬೇಕು. ಗ್ರಾಮದ  ಕೆರೆ, ರಸ್ತೆ ಸೇರಿದಂತೆ ಸಾಮೂಹಿಕ ಕಾಮಗಾರಿ ಹಾಗೂ ರೈತರು ಕೊಟ್ಟಿಗೆ ನಿರ್ಮಾಣ, ಜಮೀನಿನ ಅಭಿವೃದಿಗೆ ಯೋಜನೆ ಬಳಸಿಕೊಳ್ಳಿ. ಇದರಿಂದ ಬಡ ಕುಟುಂಬ ಗಳಿಗೆ ಸಂಜೀವಿನಿಯಂತಾಗಿದೆ ಎಂದರು.

ತೋಟಗಾರಿಕೆ, ಕೃಷಿ,  ಕಂದಾಯ, ಅರಣ್ಯ ಮತ್ತು ಪಶು ಪಾಲನಾ ಇಲಾಖೆಗಳ ಸೌಲಭ್ಯ ಹಾಗೂ ನರೇಗಾ ಯೋಜ ನೆಯಡಿ ವೈಯುಕ್ತಿಕ ಕಾಮಗಾರಿ ಮತ್ತು ಸಮುದಾಯ ಕಾಮಗಾರಿ ಯೋಜನೆಗಳಿಂದ ಸಿಗುವ ಸೌಲಭ್ಯ ಕುರಿತು ಇಲಾಖೆ ಅಧಿಕಾರಿಗಳು ಮಾಹಿತಿ  ನೀಡಿದರು.

ತಾಪಂ ಸದಸ್ಯ ಕೆಂಗಯ್ಯ, ಸಹಾಯಕ ಲೆಕ್ಕಾಧಿ ಕಾರಿ ಗೀತಾ, ಗ್ರಾಪಂ ಉಸ್ತುವಾರಿ ಅಧಿಕಾರಿ ಎನ್‌.ಸಿ .ಸಿದ್ದರಾಜು, ಜಿಪಂ ಕುಡಿಯುವ ನೀರು ಯೋಜ ನೆಯ ಎಇಇ ರಮೇಶ್‌, ಕಾರ್ಯದರ್ಶಿ ಚಂದ್ರು, ಕಂದಾಯ ಇಲಾಖೆ  ಅಧಿಕಾರಿಗಳಾದ ಮಂಜು ನಾಥ್‌, ಕೃಷ್ಣಬಾಯಿ, ಪಶು ಇಲಾಖೆ ಮಹದೇವಪ್ಪ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next