Advertisement

ನ್ಯಾಯಬೆಲೆ ಅಂಗಡಿಗೆ ಶಾಸಕ ರಾಜುಗೌಡ ಭೇಟಿ

04:24 PM Apr 15, 2020 | Naveen |

ನಾರಾಯಣಪುರ: ಬಯೋಮೆಟ್ರಿಕ್‌ ಇಲ್ಲ; ಓಟಿಪಿ ಬರಲಿಲ್ಲ ಎಂದು ಇಲ್ಲದ ನೆಪ ಹೇಳಿ ಯಾವ ಪಡಿತರದಾರರನ್ನು ವಾಪಸ್‌ ಕಳುಹಿಸಬೇಡಿ ಎಂದು ಶಾಸಕ ನರಸಿಂಹನಾಯಕ (ರಾಜುಗೌಡ) ಹೇಳಿದರು.

Advertisement

ಕೊಡೇಕಲ್‌ ಪಟ್ಟಣದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು. ಇದೇ ವೇಳೆ ಪಡಿತರದಾರರು ಓರ್ವ ಮಹಿಳೆ “ನಮ್ಮಲ್ಲಿ ಫೋನ್‌ ಇಲ್ಲ. ಅದಕ್ಕೆ ನಮಗೆ ರೇಷನ್‌ ಇಲ್ಲ ಎಂದರೆ, ಇನೋರ್ವ ಮಹಿಳೆ ನಮ್ಮ ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಬೇಕಿದ್ದು, ಅದಕ್ಕೆ ಪಡಿತರ ಬರುವುದಿಲ್ಲವಂತೆ ಎಂದು ತಮ್ಮ ಅಳಲು ಶಾಸಕರ ಮುಂದೆ ತೋಡಿಕೊಂಡರು.

ಈ ಕುರಿತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದ ಶಾಸಕರು, ಜಿಲ್ಲಾ ಆಹಾರ ನಿದೇರ್ಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮುಖ್ಯಮಂತ್ರಿಗಳು ನೀಡಿರುವ ಆದೇಶ ಪ್ರತಿ ಕುರಿತಂತೆ ಮಾತನಾಡಿದರು. ಪ್ರತಿಯೊಬ್ಬ ಪಡಿತರದಾರರಿಗೆ ಸಹಿ ಪಡೆಯುವ ಮೂಲಕ ಪಡಿತರ ನೀಡುವಂತೆ ಆದೇಶ ಹೊರಡಿಸಿ ಎಂದು ಹೇಳಿದರು. ಸಿದ್ದನಗೌಡ ಕರಿಭಾವಿ, ಸಂತೋಷ ಕೊಡೇಕಲ್ಮಠ, ಬಸವರಾಜ ಭದ್ರಗೋಳ, ಪ್ರಮೋದ ಜೋಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next