Advertisement

ನಾರಾಯಣಮಂಗಲ: ಮದ್ಯದಂಗಡಿ ವಿರೋಧಿ ಹೋರಾಟಕ್ಕೆ ವಿಹಿಂಪ ಬೆಂಬಲ

02:03 PM Apr 28, 2017 | |

ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ  ನಡೆಯುತ್ತಿರುವ ಮದ್ಯದಂಗಡಿ ವಿರೋಧಿ ಹೋರಾಟದಂಗವಾಗಿ ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲಾ  ಪದಾಧಿಕಾರಿಗಳು ಭೇಟಿ ನೀಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ  ಅಂಗಾರ ಶ್ರೀಪಾದ ಮತ್ತು  ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಉಳುವಾನ ಶಂಕರ ಭಟ್‌ ಮಾತನಾಡಿ, ಆರೋಗ್ಯವಂತ ಸಮಾಜವಿರುವಲ್ಲಿ  ಮದ್ಯದಂತಹ ಅಮಲು ದ್ರವ್ಯಗಳನ್ನು  ಮಾರಾಟ ಮಾಡಲು ಹೊರಟರೆ ಇಡೀ ಸಮಾಜವೇ ಕಲುಷಿತಗೊಳ್ಳಲಿದೆ. ಈ ನಿಟ್ಟಿನಲ್ಲಿ  ಕೇರಳ ರಾಜ್ಯ ಸರಕಾರವೇ ಇನ್ನಾದರೂ ಮಧ್ಯ ಪ್ರವೇಶಿಸಿ ಸಾರ್ವಜನಿಕರ ಹೋರಾಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. 

ಅಲ್ಲದೆ ಈ ನಿಟ್ಟಿನಲ್ಲಿ  ಅಧಿಕಾರಿಗಳು, ಸಚಿವರು ಮತ್ತು  ಶಾಸಕರ ನಿರ್ಲಕ್ಷ್ಯ ಧೋರಣೆಯನ್ನು  ಖಂಡಿಸಲಾಯಿತು. ವಿಹಿಂಪ ಜಿಲ್ಲಾ  ಸತ್ಸಂಗ ಪ್ರಮುಖ್‌, ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ, ಜಿಲ್ಲಾ  ಗೋರûಾ  ಪ್ರಮುಖ್‌ ಗೋಪಾಲ ಶೆಟ್ಟಿ  ಅರಿಬೈಲು ನೆತ್ಯ ಮುಂತಾದವರು ಭಾಗವಹಿಸಿದ್ದರು. ಮಾತ್ರವಲ್ಲದೆ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ, ಮಾತƒ ಮಂಡಳಿ, ದುರ್ಗಾವಾಹಿನಿ ಕೂಡ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಈ ಸಂದರ್ಭದಲ್ಲಿ ಕಾಸರಗೋಡು ಬ್ಲಾಕ್‌ ಪಂಚಾಯತ್‌ ಸದಸ್ಯ ಸತ್ಯಶಂಕರ ಭಟ್‌ ಹಿಳ್ಳೆಮನೆ, ಕುಂಬಳೆ ಗ್ರಾಮ ಪಂಚಾಯತ್‌ ಸದಸ್ಯೆ ಪುಷ್ಪಲತಾ ಎನ್‌., ಕೇಶವಪ್ರಸಾದ್‌ ನಾಣಿತ್ತಿಲು ಸಹಿತ ಅಪಾರ ಸಂಖ್ಯೆಯ ಪ್ರತಿಭಟನಾ ನಿರತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next