Advertisement

ಉಪಚುನಾವಣೆ ಪಂಚಾಂಗದಲ್ಲಿ ಪಂಚ ನಾಯಕರ ಭವಿಷ್ಯ!

03:45 AM Apr 08, 2017 | Team Udayavani |

ಮೊದಲೇ ಕಾವೇರಿದ ರಾಜ್ಯಕ್ಕೆ ರಾಜಕೀಯ ಬಿಸಿ ಹೆಚ್ಚಿಸಿದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಬಹಿರಂಗ ಪ್ರಚಾರ ಶುಕ್ರವಾರ ಅಂತ್ಯವಾ ಗಿದೆ. ಈಗ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಅಗತ್ಯಕ್ಕಿಂತ ಹೆಚ್ಚೇ ಪ್ರತಿಷ್ಠೆಯಾಗಿಬಿಟ್ಟಿರುವ ಈ ಚುನಾವಣೆಯಲ್ಲಿ ಗೆಲ್ಲುವವರು ಮತ್ತು ಸೋಲುವವರು ಬರಿ ಅಭ್ಯರ್ಥಿಗಳಲ್ಲ. ಈ ಚುನಾವಣೆಯಲ್ಲಿ ತಮ್ಮನ್ನೇ ತಾವು ಮುಡಿಪಾಗಿಟ್ಟುಕೊಂಡು ಪ್ರತಿಷ್ಠೆಯನ್ನೇ ಅಡವಿಟ್ಟಿರುವ ಐವರು ರಾಜಕೀಯ ನಾಯಕರ ಗೆಲುವು ಸೋಲಿನ ಲೆಕ್ಕಾಚಾರವೂ ಇಲ್ಲಿದೆ. ಈ ಫ‌ಲಿತಾಂಶದ ಹಿಂದೆ ಯಾರ್ಯಾರ ರಾಜಕೀಯ ಭವಿಷ್ಯ ಅಡಗಿದೆ ಎಂಬ ವಿಶ್ಲೇಷಣೆ ಇಲ್ಲಿದೆ.

Advertisement

ಸಿದ್ದರಾಮಯ್ಯ
ಗೆದ್ದರೆ: 
-ಪಕ್ಷದಲ್ಲಿ ಪ್ರಶ್ನಾತೀತ ನಾಯಕ 
-ಮುಂದಿನ ಚುನಾ ವಣೆ ಯಲ್ಲಿ ಖಚಿತ ನಾಯಕತ್ವ‌ 
-ಅಭ್ಯರ್ಥಿಗಳ ಆಯ್ಕೆ ಯಲ್ಲಿ ಪ್ರಾಮುಖ್ಯತೆ 
-ಸರ್ಕಾರಕ್ಕೆ ಜನಮನ್ನಣೆ ಇದೆ ಎನ್ನಲು ಸಾಧ್ಯ 
-ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಧಿಕಾರ

ಸೋತರೆ: 
-ಆಡಳಿತ ವಿರೋಧಿ ಅಲೆ ಸಾಬೀತು 
-ಪಕ್ಷದೊಳಗೆ ಬಲ ಕುಸಿತ 
-ಮುಂದಿನ ಚುನಾವಣೆ ಮೇಲೆ ಪರಿಣಾಮ
-ಅಹಿಂದ ವರ್ಗ ಪಕ್ಷದಿಂದ ದೂರವಾಗುತ್ತಿರುವ ಮುನ್ಸೂಚನೆ

ಯಡಿಯೂರಪ್ಪ
ಗೆದ್ದರೆ: 
-ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಬಲವರ್ಧನೆ
-ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಇವರ ತೀರ್ಮಾನವೇ ಅಂತಿಮ 
-ಚುನಾವಣೆ ಸಾರಥ್ಯಅಬಾಧಿತ 
-ವಿರೋಧಿ ಬಣಕ್ಕೆ ತಿರುಗೇಟು 

ಸೋತರೆ: 
-ಪಕ್ಷದಲ್ಲಿ ಪ್ರಾಮುಖ್ಯತೆ ಕ್ಷೀಣಿಸಬಹುದು
-ವಿರೋಧಿ ಬಣಗಳ ಕೈ ಮೇಲಾಗಬಹುದು
-ಪ್ರತಿ ನಿರ್ಧಾರಕ್ಕೂ ಹೈಕಮಾಂಡ್‌ ಸಮ್ಮತಿ ಬೇಕಾಗಬಹುದು
-ಆರೆಸ್ಸೆಸ್‌, ಪಕ್ಷದ ಹಿಡಿತ ಇವರ ಮೇಲೆ ಹೆಚ್ಚಾಗಬಹುದು.

Advertisement

ಜಿ.ಪರಮೇಶ್ವರ
ಗೆದ್ದರೆ: 

-ನಂಜನಗೂಡಿನಲ್ಲಿ ಅಗ್ನಿ ಪರೀಕ್ಷೆ ಎದುರಿಸಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮುಂದುವರೆಸಲು ಒತ್ತಡ ಹಾಕ ಬ ಹುದು 
-ದಲಿತ ನಾಯಕನೆಂದು ಹೇಳಲು ಪುಷ್ಟಿ
-ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬರಲು ಅವಕಾಶ
-ಮುಂದೆ ಟಿಕೆಟ್‌ ಹಂಚಿಕೆಯಲ್ಲಿ ಪ್ರಮುಖ ಪಾತ್ರ.

ಸೋತರೆ: 
-ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಖಚಿತ
-ಪ್ರಭಾವಿ ದಲಿತ ನಾಯಕನಲ್ಲ ಎಂಬ ಸಂದೇಶ ರವಾನೆ

ಡಿ.ಕೆ.ಶಿವಕುಮಾರ
ಗೆದ್ದರೆ: 
-ಗುಂಡ್ಲುಪೇಟೆ ಜವಾಬ್ದಾರಿ ಹೊತ್ತಿರುವ ಇವರು ಅಲ್ಲಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹಾದಿ ಸುಗಮ
-ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲು ಅವಕಾಶ 
-ಕೃಷ್ಣ ನಿರ್ಗಮನದ ನಂತರ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕನೆಂದು ಬಿಂಬಿಸಿಕೊಳ್ಳಲು ಅವಕಾಶ

ಸೋತರೆ: 
-ಕೆಪಿಸಿಸಿ ಅಧ್ಯಕ್ಷ ಹುದ್ದೆ ಕೈ ತಪ್ಪಬಹುದು
– ನಾಯಕತ್ವ ನೀಡಲು ಹೈಕಮಾಂಡ್‌ ಹಿಂದೇಟು ಸಾಧ್ಯತೆ
-ಒಕ್ಕಲಿಗರ ವಿಶ್ವಾಸಗಳಿಸಲು ವಿಫ‌ಲ ಎಂಬ ಸಂದೇಶ ರವಾನೆ

ಶ್ರೀನಿವಾಸ್‌ ಪ್ರಸಾದ್‌
ಗೆದ್ದರೆ: 

-ಸಚಿವ ಪದವಿ ಕಿತ್ತುಕೊಂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಂಡು ಬಿಜೆಪಿಯಲ್ಲಿ ಭದ್ರ ಬೇರು 
-ಪ್ರಭಾವಿ ದಲಿತ, ರಾಷ್ಟ್ರೀಯ ನಾಯಕ ನೆಂದು ಹೊರಹೊಮ್ಮಬಹುದು

ಸೋತರೆ: 
-ರಾಜಕೀಯ ಭವಿಷ್ಯವೇ ಅಂತ್ಯವಾಗಬಹುದು
-ಪಕ್ಷಾಂತರ ನಿರ್ಧಾರ ತಪ್ಪು ಎಂದು ಸಾಬೀತು
-ಬಿಜೆಪಿಯಲ್ಲಿ ಮೂಲೆಗುಂಪು ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next