Advertisement

ನಾನಿಲ್ತಾರ್‌ ಅಭಿಮಾನಿ ಬಳಗ: ಆಮಂತ್ರಣ ಪತ್ರಿಕೆ ಬಿಡುಗಡೆ

04:30 PM Jul 04, 2019 | Vishnu Das |

ಮುಂಬಯಿ: ನಾನಿಲ್ತಾರ್‌ ಅಭಿಮಾನಿ ಬಳಗ ಮುಂಬಯಿ ಇದರ ವತಿಯಿಂದ ನಡೆಯಲಿರುವ 10ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜೂ. 30ರಂದು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಚಾರ್‌ಕೋಪ್‌ನ ಸಂತೋಷ್‌ ಭಟ್‌ ಇವರು ಬಿಡುಗಡೆಗೊಳಿಸಿ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಧಾರ್ಮಿಕ ಕಾರ್ಯದಲ್ಲಿ ಸುಮಂಗಲಿ
ಯರು ಪಾಲ್ಗೊಂಡು ಸೌಭಾಗ್ಯ ಹೊಂದುವಂ
ತಾಗಲಿ ಎಂದು ನುಡಿದು ಶುಭ ಹಾರೈಸಿದರು.

Advertisement

ನಾನಿಲ್ತಾರ್‌ ಅಭಿಮಾನಿ ಬಳಗ ಅಧ್ಯಕ್ಷ ಸುಂದರ ಶ್ರೀಯಾನ್‌ ಅವರು ಮಾತನಾಡಿ, ಹತ್ತು ವರ್ಷಗಳು ನಿರಂತರವಾಗಿ ಭಕ್ತರೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಈ ಕಾರ್ಯಕ್ರಮವು ನಡೆಯುತ್ತಾ ಬಂದಿದೆ. ಈ ವರ್ಷವೂ ಭಕ್ತರೆಲ್ಲರ ಸಹಕಾರ ಮತ್ತು ಅಭಿಮಾನಿ ಬಳಗದ ಸದಸ್ಯರು ಸಹಕಾರದಿಂದ ರಾಜ್ಯವು ಯಶಸ್ವಿಯಾಗಿ ನಡೆಯುವಂತಾಗಲು ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು

ಬಳಗದ ಕಾರ್ಯದರ್ಶಿ ಸುಕುಮಾರ್‌ ಸಾಲ್ಯಾನ್‌ ಸ್ವಾಗತಿಸಿ
ದರು ಮಹಿಳಾ ಸದಸ್ಯರು ಪ್ರಾರ್ಥನೆ ನಡೆಸಿದರು. ಅತಿಥಿಗಳಾಗಿ ಹರೀಶ್‌ ಮೂಲ್ಯ, ದಿನೇಶ್‌ ಖಾರ್‌ದಾಂಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸುಕುಮಾರ್‌ ಸಾಲ್ಯಾನ್‌, ಜತೆ ಕಾರ್ಯದರ್ಶಿ ನಿತಿನ್‌ ಸಿ. ಬಂಜನ್‌, ಗೌರವ ಕೋಶಾಧಿಕಾರಿ ಕೇಶವ್‌ ಬಂಜನ್‌ ಅವರು ಉಪಸ್ಥಿತರಿದ್ದರು.

ಸಂಸ್ಥೆಯ ಸಲಹೆಗಾರರು ಮತ್ತು ಸದಸ್ಯರಾದ ವಸಂತಿ ಶ್ರೀಯಾನ್‌, ಉಷಾ ಸಾಲ್ಯಾನ್‌, ಸರೋಜಾ ಎಚ್‌. ಮೂಲ್ಯ, ಉಮಾವತಿ ಹೊನ್ನಯ್ಯ ಮೂಲ್ಯ, ಹೇಮಂತ ಮೂಲ್ಯ, ನಳಿನಿ ಎಸ್‌. ಬಂಜನ್‌ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next