Advertisement

ಹಿಮಾಚಲ ಪ್ರದೇಶ ಸಿಜೆ ಆಗಿ ನ್ಯಾ.ನಾರಾಯಣಸ್ವಾಮಿ ಹೆಸರು ಶಿಫಾರಸು

11:40 PM Aug 30, 2019 | Team Udayavani |

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಅನುಮೋದಿಸಿ ಕೇಂದ್ರ ಸರ್ಕಾರ ರಾಷ್ಟಪತಿಯ ವರಿಗೆ ಕಳಿಸಿಕೊಡಲಿದೆ. ರಾಷ್ಟ್ರಪತಿ ಯವರು ಅಂಕಿತ ಹಾಕಿದ ಮೇಲೆ ಅಧಿಕೃತ ಆದೇಶ ಹೊರಬೀಳಲಿದೆ. ನ್ಯಾ. ನಾರಾಯಣಸ್ವಾಮಿಯವರು 1987ರಲ್ಲಿ ಹೈಕೋರ್ಟ್‌ನಲ್ಲಿ ವಕೀಲರ ವೃತ್ತಿ ಆರಂಭಿಸಿದರು.

Advertisement

1995ರಿಂದ 99ರವರೆಗೆ ಸರ್ಕಾರಿ ಪ್ಲೀಡರ್‌ ಆಗಿ ಸೇವೆ ಸಲ್ಲಿಸಿದ್ದಾರೆ. 2007ರ ಜುಲೈ 4ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2009ರ ಏ.18ರಂದು ಖಾಯಂ ನ್ಯಾಯಮೂರ್ತಿ ಯಾಗಿ ನೇಮಕಗೊಂಡರು. ನ್ಯಾ. ದಿನೇಶ್‌ ಮಾಹೇಶ್ವರಿ ಅವರು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದ ಹಿನ್ನೆಲೆಯಲ್ಲಿ 2019ರ ಜ.17ರಿಂದ ಮೇ 9ರವರೆಗೆ ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ನಾರಾಯಣಸ್ವಾಮಿ ಕರ್ತವ್ಯ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next