Advertisement

ಪರಿಷ್ಕೃತ ಮಾರ್ಗಸೂಚಿಗೆ ನಾಗಾಭರಣ ಒತ್ತಾಯ

07:12 AM Jun 25, 2020 | Lakshmi GovindaRaj |

ಬೆಂಗಳೂರು: ಯುಜಿಸಿ ಅಧ್ಯಾಪಕರಿಗೆ ಪುನಶ್ಚೇತನ ಶಿಬಿರಗಳ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಪ್ರಾದೇಶಿಕ ಭಾಷೆಗಳ ಬದಲಿಗೆ “ಇಂಡಿಯನ್‌ ಲಿಟ್ರೇಚರ್‌ ಆಂಡ್‌ ಕಲ್ಚರ್‌’ ಎಂದು ಬದಲಾಯಿಸಿರುವುದು ಪ್ರಾದೇಶಿಕ ಭಾಷೆಗಳ ಕಲಿಕೆ, ಬೋಧನೆ ಹಾಗೂ ಬೆಳವಣಿಗೆಗೆ ವಿರುದ್ಧವಾದ ನಡೆ ಎಂದು ಕನ್ನಡ ಅಭಿವೃದಿಟಛಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಕನ್ನಡ (ಪ್ರಾದೇಶಿಕ ಭಾಷೆಯಲ್ಲಿ) ಅಧ್ಯಾಪಕರ  ಸ್ಥಾನೀಕರಣಕ್ಕೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ (ಕನ್ನಡ) ಪುನಶ್ಚೇತನ ಶಿಬಿರಗಳನ್ನು ನಡೆಸುವುದು ಅಗತ್ಯ ಹಾಗೂ ಅನಿವಾರ್ಯ. ಆದರೆ ಯುಜಿಸಿಯ ನಿಯಮಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪುನಶ್ಚೇತನ ಶಿಬಿರಗಳನ್ನು ನಡೆಸಲು  ಅವಕಾಶ ಇಲ್ಲವೆಂದು ರಾಜ್ಯದ ಕನ್ನಡ ಪ್ರಾಧ್ಯಾಪಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಕ್ರಮಕೈಗೊಳ್ಳುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ ಸೂಚಿಸಲಾಗಿದೆ  ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಕೂಡಲೇ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸು ವಂತೆ ಆಯೋಗಕ್ಕೆ ಟಿ. ಎಸ್‌. ನಾಗಾಭರಣ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next