Advertisement

ನಾಡಾ ನನ್ನನ್ನು ಗುರಿಯಾಗಿಸಿ  ದಾಳಿ ಮಾಡುತ್ತಿದೆ: ಬಜರಂಗ್‌

11:27 PM Jul 02, 2024 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ನನ್ನನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ ಎಂದು ಕುಸ್ತಿಪಟು ಬಜರಂಗ್‌ ಪುನಿಯ ಗಂಭೀರ ಆರೋಪ ಮಾಡಿದ್ದಾರೆ. ನಾಡಾ ವ್ಯವಸ್ಥೆಯಲ್ಲಿನ ದೋಷ ತೋರಿಸಿದ್ದಕ್ಕೆ, ನನ್ನ ಕುಸ್ತಿ ಜೀವನವನ್ನೇ ಮುಗಿಸಲು ನೋಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ಉದ್ದೀಪನ ಸೇವನೆ ಪರೀಕ್ಷೆಗಾಗಿ ಮೂತ್ರ ಮಾದರಿ ತೆಗೆದುಕೊಂಡು ಹೋಗಲು ಬಂದಿದ್ದ ನಾಡಾ ಅಧಿಕಾರಿಗಳಿಗೆ ಬಜರಂಗ್‌ ಮಾದರಿ ನೀಡಿರಲಿಲ್ಲ. ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿರುವ ನಾಡಾ, ಬಜರಂಗ್‌ ಅವರನ್ನು 2ನೇ ಬಾರಿ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಆದರೆ ತನ್ನ ಮೇಲಿನ ಅಮಾನತನ್ನು ವಿರೋಧಿಸಿರುವ ಬಜರಂಗ್‌, “ನಾಡಾ ಅಧಿಕಾರಿಗಳು ಮೂತ್ರದ ಮಾದರಿ ಕೊಂಡೊಯ್ಯಲು ತಂದಿದ್ದ ಕಿಟ್‌ನ ಅವಧಿ ಮೀರಿತ್ತು. ಇದನ್ನು ನಾನು ಪ್ರಶ್ನಿಸಿದ್ದೆ. ಇದಕ್ಕಾಗಿ ನನ್ನನ್ನು ನಾಡಾ ಗುರಿಯಾಗಿಸಿದೆ’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next