Advertisement

ಪತ್ರಕರ್ತ ಅನೂಪ್‌ ಕುಮಾರ್‌ ನಿಧನ

06:30 AM Jan 02, 2018 | |

ಮೈಸೂರು: ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಪತ್ರಕರ್ತ ಅನೂಪ್‌ ಕುಮಾರ್‌ (51) ಮೊನಾಲಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೊಸ ವರ್ಷಾಚರಣೆಗಾಗಿ ಭಾನುವಾರ ಕುಟುಂಬ ಸಮೇತ ಮೊನಾಲಿಗೆ ತೆರಳಿದ್ದರು. 

Advertisement

ಮೈಸೂರು ವಿಜಯ ನಗರದ ನಿವಾಸಿಯಾದ ಅನೂಪ್‌, ದಶಕಗಳ ಹಿಂದೆ ಮೈಸೂರಿನಲ್ಲಿ ಈಟಿವಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದರು. ಸತ್ಯದೇವ್‌ ಕೊಲೆ ಪ್ರಕರಣದ ಬೆನ್ನತ್ತಿ ವರದಿ ಮಾಡಿ ಆ ಪ್ರಕರಣ ಬೇಧಿಸುವಲ್ಲಿ ಪೊಲೀಸರಿಗೆ ನೆರವಾಗಿದ್ದರು. ನಂತರ ದೆಹಲಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದರು. ಮೊನಾಲಿಯಿಂದ ಮಂಗಳವಾರ ಬೆಳಿಗ್ಗೆ ಮೃತದೇಹವನ್ನು ದೆಹಲಿಗೆ ತರಲಿದ್ದು, ಸಂಜೆ ವೇಳೆಗೆ ಮೈಸೂರಿಗೆ ತರಲಾಗುವುದು. ನಗರದ ಗೋಕುಲಂನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಅದಕ್ಕೂ ಮುನ್ನ ವಿಜಯನಗರದ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next